ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು : ಸ್ಥಳೀಯ ಹಿರಿಯ ಪತ್ರಕರ್ತ ಬಿ.ನಂದಿಕೋಲಮಠ ಅವರ ತಂದೆ ಡಾ:ಅಮರಯ್ಯ ಗುರುಪಾದಯ್ಯ ನಂದಿಕೋಲಮಠ (90)ಅನೆಹೂಸೂರು ಗುರುವಾರ ಬೆಳಗಿನ ಜಾವ ೧ ಗಂಟೆಗೆ ಹೃದಯಾಘಾತ ದಿಂದ ದೈವಾದೀನರಾಗಿದ್ದಾರೆ.
ಅವರಿಗೆ ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು, ಪತ್ನಿ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸ್ವಗ್ರಾಮ ಲಿಂಗಸೂಗೂರಿನಲ್ಲಿ ಮೃತರ ಅಂತ್ಯಕ್ರಿಯೆ ಗುರಿವಾರ 2 ಗಂಟೆಗೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಲಿಂಗಸುಗೂರು ತಾಲೂಕು ಪತ್ರಕರ್ತರು, ಸಮಾಜಸೇವಕರು, ನಾನಾ ಸಂಘಟನೆಯ ಮುಖಂಡರು ಭೇಟಿ ನೀಡಿ ಮೃತರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಭಗವಂತ ನೀಡಲೆಂದು ಸಂತಾಪ ಸೂಚಿಸಿದ್ದಾರೆ.