Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ….

ಸಿಂಧನೂರು: ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ಬೆಂಬಲ ನೀಡಲು ಪ್ರಗತಿಪರ ಮುಖಂಡ.ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶೇಕ್ಷಖಾದ್ರಿ ಮನವಿ.ಪ್ರಗತಿಪರ ಸಂಘಟನೆಗಳ ಒಕ್ಕೂಟ. ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ರಂದು ಕರೆ ನೀಡಿದ ಬಂದ್ ಬೆಂಬಲ ನೀಡುವಂತೆ ಮನವಿ‌ ಮಾಡಲು ಪ್ರಮುಖ ಬದಿಗಳಲ್ಲಿ ಆಟೋ ಗಳಲ್ಲಿ ಸಂಚರಿಸಿ ನಗರದ ಗಾಂಧಿ ವೃತ್ತದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಂದ್ರ ಹಾಗೂ ರಾಜ್ಯ ಲೋಕಸಭಾ. ವಿಧಾನ ಸಭೆಗಳನ್ನು ಕತ್ತಲಲ್ಲಿಟ್ಟು ರೈತ, ದಲಿತರ. ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಪಾಸ್ ಮಾಡುವ ಮೂಲಕ ದೇಶದ ಜನತೆಗೆ ವಂಚಿಸಲಾಗುತ್ತಿದೆ.ಸಂವಿಧಾನ ರಕ್ಷಣೆಗಾಗಿ. ಯುವ ಜನರಿಗೆ ಉದ್ಯೋಗಾಗಿ.ಕಾರ್ಮಿಕ. ರೈತರ ರಕ್ಷಣೆಗಾಗಿ ಮಾಡುವ ಹೋರಾಟಕ್ಕೆ ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ಬೆಂಬಲ ನೀಡಲು ಮನವಿ ಮಾಡಿದರು.

Share and Enjoy !

Shares