ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಶಿಕ್ಷೆಗೆ ಆಗ್ರಹ

 

ವಿಜಯನಗರ ವಾಣಿ

ರಾಯಚೂರು ಜಿಲ್ಲೆ

ಲಿಂಗಸೂಗೂರು:- ಉತ್ತರಪ್ರದೇಶದಲ್ಲಿ ನಿರಂತರವಾಗಿ ನಡೆಯಿತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಬರ್ಬರ ಹಿಂಸಾತ್ಮಕ ಘಟನೆಗಳು ಹಾಗೂ ಅಲ್ಲಿನ ಸರ್ಕಾರದ ತೀವ್ರ ನಿರ್ಲಕ್ಷ ಮತ್ತು ಆರೋಪಿಗಳಿಗೆ ರಕ್ಷಣೆ ನೀಡುವ ಧೋರಣೆಯನ್ನು ಖಂಡಿಸಿ ಮಹರ್ಷಿ ವಾಲ್ಮೀಕಿ ಸಂಘಟನೆ,ತಾಲ್ಲೂಕು ಸಮಿತಿ ವತಿಯಿಂದ ಲಿಂಗಸೂಗೂರು ಉತ್ತರ ಪ್ರದೇಶ ಸರ್ಕಾರದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಗಳು ನಡೆಯುತ್ತಿದೆ ಅದರಲ್ಲೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಅಧಿತ್ಯರವರ ಸರ್ಕಾರ ಗೂಂಡಾ ರಾಜ್ಯದಂತಾಗಿದ್ದು, ಅಲ್ಲಿ ನೆಲದ ಕಾನೂನುಗಳಿಗೆ ಬೆಲೆಯೇ ಇಲ್ಲದ ಜಂಗಲ್ ರಾಜ್ಯಯಾಗಿದೆ. ಅತ್ಯಾಚಾರದ ಸಂತ್ರಸ್ಥೆಯ ಕುಟುಂಬಕ್ಕೆಸೂಕ್ತ ರಕ್ಷಣೆ ನೀಡಬೇಕು ಶವ ಸಂಸ್ಕಾರಕ್ಕೂ ಅವಕಾಶ ನೀಡದೆ ಅಪರಾತ್ರಿಯಲ್ಲಿ ತಾವೇ ಚಿತೆಗೆಬೆಂಕಿ ಇಟ್ಟ ಪೊಲೀಸ್ ಮತ್ತು ಇತರ ಅಧಿಕಾರಿಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾನ್ಯ ಸಹಾಯಕ ಆಯುಕ್ತರ ಮುಖಾಂತರ ಮಾನ್ಯ ರಾಷ್ಟ್ರಪತಿಗಳು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಲಿಂಗಸ್ಗೂರು ವತಿಯಿಂದ ಮನವಿ ಸಲ್ಲಿಸಿದ ರುಈ ಸಂದರ್ಭದಲ್ಲಿ ಅಮರೇಗೌಡ ಜಿಲ್ಲಾ ಉಪಾಧ್ಯಕ್ಷರು ಅಶೋಕ್ ನಾಯಕ್ ಲಿಂಗಸೂಗೂರು ಕೆಂಪಣ್ಣ ದೊರೆ ಸುರೇಶ್ ನಾಯಕ್ ಹನುಮಂತ ನಾಯಕ್ ಶಿವಲಿಂಗ ದಳಪತಿ ಮಂಜುನಾಥ್ ಅಮರೇಶ ಗುಂಡಪ್ಪ ಗೌಡ ಬಸು ನಾಯಕ್ ಅವರು ನಾಗರಾಜ್ ಕನಕರಾಯ ಅಂಬರೀಶ್ ನಾಯಕ್ ಐದಬಾವಿ ಇತರರು ಇದ್ದರು

Share and Enjoy !

Shares