ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆಲಿಂಗಸೂಗೂರು:) ತಾಲ್ಲೂಕಿನ ಈಚನಾಳ ಗ್ರಾಮದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗಿದ್ದು, ಗುಂಡಿಗಳಲ್ಲಿ ನಿಂತ ನೀರು ಮಲಿನವಾಗಿ ಸೊಳ್ಳೆ ಗಳು ಜಾಸ್ತಿಯಾಗಿದ್ದು ಹಲವು ಸಾಂಕ್ರಾಮಿಕ ರೋಗಗಳು ಹರಡುವ ಸಾದ್ಯತೆಇದ್ದು . ಹಲವಾರು ಈ ಗುಂಡಿಗಳು ಬಿದ್ದಿದ್ದು ಎಚ್ಚೆತ್ತು ಕೊಳ್ಳದ ತಾಲೂಕ ಆಡಳಿತದ ವಿರುದ್ಧ. ಸಾರ್ವಜನಿಕರು ಇಡಿ ಶಾಪಹಾಕುತ್ತಿದ್ದುಈ ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ತಾಲೂಕ ಆಡಳಿತದ ವಿರುದ್ದ ಪ್ರತಿಭಟನೆ ಮಾಡುವದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.ಹೇಳಿಕೆ:- ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೇ ಇದೂ ನಮಗೇ ಸಂಬಂಧಿಸಿದಲ್ಲ ಪಿಡಬ್ಲ್ಯೂಡಿ ಇಲಾಖೆ ಗೇ ಸಂಬಂಧಿಸಿದೆ ಅನ್ನುತ್ತಾರೆ, ಇನ್ನೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ಕೇಳಿದರೆ ಈಗಾಗಲೇ ಟೆಂಡರ್ ಆಗಿದೇ ಎಂದು ಎರಡು ತಿಂಗಳಿಂದ ಹೇಳುತ್ತಿದ್ದಾರೆ. ಆದರೆ ಇವರೆಡೂ ಇಲಾಖೆ ಗಳ ಮಧ್ಯೆ ನಮ್ಮಗಳ ಸಮಸ್ಯೆ ಹೇಳತೀರದೂ ಎಂದು ಅಧಿಕಾರಿಗಳ ಬೆಜವಬ್ದಾರಿ ನಡೆಗೆ ಗ್ರಾಮಸ್ಥರಾದ ಹನುಮಂತಪ್ಪ ದ್ಯಾಪೂರ್ ಬೇಸರ ವ್ಯಕ್ತಪಡಿಸಿದ್ದಾರೆ.