ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ:
ಸಿಂಧನೂರು:ರಾಜ್ಯ ಮಟ್ಟದ ಮುಕ್ತ ಕಥಾ ಸ್ಪರ್ಧೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಲು
ಡಾ! ಚನ್ನನಗೌಡ ಪಾಟೀಲ್ ಮನವಿ ಮಾಡಿದರು.
ನಗರದ ರುದ್ರಗೌಡ ಕಣ್ಣಿನ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ರುದ್ರಗೌಡ ಪಾಟೀಲ್ ಪ್ರತಿಷ್ಠಾಪನೆ, ಆಕ್ಸ್ ಫರ್ಡ್ ಫೌಂಡೇಶನ್ ಸಹಯೋಗದಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಮುಕ್ತ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು.
ಈ ಮುಕ್ತಾ ಕಥಾ ಸ್ಪರ್ಧೆಗೆ ಯಾವುದೇ ವಯಸ್ಸಿನ ಮಿತಿ. ಶುಲ್ಕ ವಿರುವುದಿಲ್ಲ. ಸ್ಪರ್ಧೆಗೆ ಕಳಿಸುವ ಕಥೆಯು
2500 ಪದಗಳ ಮಿತಿಯೊಳಗೆ ಇರಬೇಕು.
ಪ್ರಥಮ ಬಹುಮಾನವಾಗಿ 15 ಸಾವಿರ, ದ್ವಿತೀಯ ಬಹುಮಾನವಾಗಿ 10 ಸಾವಿರ, ತೃತೀಯ 5 ಸಾವಿರ ಈ ರೀತಿಯಲ್ಲಿ ಬಹುಮಾನ ನೀಡಲಾಗುತ್ತದೆ. ಕಾರಣ ಪ್ರತಿಯೊಬ್ಬರೂ ತಮ್ಮ ಕಥೆ ಗಳನ್ನು ಇದೆ ತಿಂಗಳು 30 ರ ಒಳಗೆ ಕಳಿಸಲು ವಿನಂತಿ ಮಾಡಿದರು