ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿ :ತಾಲ್ಲೂಕಿನ ಇಲಾಲಾಪೂರ ಗ್ರಾಮದಲ್ಲಿ ಇಂದು ಮಧ್ಯಾನ ಏಕಾಏಕಿ ಗ್ರಾಮಕ್ಕೆ ಬಂದು ಹುಚ್ಚು ತೊಳವೊಂದು ಆಟವಾಡುತ್ತಿದ್ದ ಬಾಲಕನಿಗೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ ಆತನನ್ನು ಬಿಡಿಸಲು ಹೊದ ವೃದ್ದನಿಗೆ ಕಚ್ಚಿದ್ದು ಆತನು ಕೂಡ ಗಂಭೀರ ಗಾಯಗೊಂಡು ಇಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೀಗೆ ಸುಮಾರು 5 ಜನರಿಗೆ ಕಚ್ಚಿದ್ದು ಸ್ಥಳೀಯ ಆಸ್ಪತ್ರೆಯಲ್ಲು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ರೀತಿಯಾಗಿ ಬೆಚ್ಚಮರಡಿ, ಹರ್ವಾಪೂರ, ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಹುಚ್ಚು ತೋಳಗಳ ಹಾವಳುಹೆಚ್ಚಾಗಿದ್ದು ಜನಗಳು ಹೊಲಗಳಲ್ಲಿ ಕೆಲಸ ಮಾಡಲು ಬಯಬೀತರಾಗಿದ್ದಾರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬವದು ಸರ್ವಾಜನಿಕರು ಆಗ್ರಹಿಸುತ್ತಿದ್ದಾರೆ.