ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ .
ಮಾನ್ವಿ: ತಾಲೂಕಿನ ಹಿರೇಕೊಟ್ನೆಕಲ್ ಎಸ್ಬಿಐ ಬ್ಯಾಂಕ್ ಬೀಗ ಮುರಿದು ದರೋಡೆಗೆ ಯತ್ನಿಸಿದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ಬ್ಯಾಂಕ್ ಹೊರಗಡೆಯ ಸಿಸಿ ಕ್ಯಾಮರಾ ಜಖಂಗೊಳಿಸಿ ಮುಖ್ಯ ಬಾಗಿಲು ಒಡೆದು ಬ್ಯಾಂಕ್ ಒಳಗೆ ಪ್ರವೇಶಿಸಿ ಕಳ್ಳರು ಹಣ ದೋಚುತ್ತಿದ್ದರು.
ಅದೇ ಸಮಯಕ್ಕೆ ರಾತ್ರಿ ಗಸ್ತು ಬಂದ ಪೊಲೀಸರು ಬ್ಯಾಂಕ್ ಬಾಗಿಲು ತೆರೆದಿದ್ದನ್ನು ಗಮನಿಸಿ ಬ್ಯಾಂಕ್ ಒಳಗೆ ಹೋಗಿದ್ದಾರೆ. ಪೊಲೀಸರು ಬಂದಿದ್ದನ್ನು ಕಂಡು 3 ಜನ ದರೋಡೆಕೋರರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಒಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇಬ್ಬರು ದರೋಡೆಕೋರರು ಪರಾರಿಯಾಗಿದ್ದು, ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.