ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ…
ಸಿಂಧನೂರು : ವೆಂಕಟರಾವ್ ನಾಡಗೌಡ ಕೇಸ್ ಮಾಡುವುದರಲ್ಲಿ ನಿಪುಣ.ಸುಳ್ಳಿನ ಸರದಾರ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಟೀಕೆ ಮಾಡಿದರು..ನಗರದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ರವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಕರೆಯಲಾಗಿತ್ತು.ಈ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ವೆಂಕಟರಾವ್ ನಾಡಗೌಡ ರವರೆಗೆ ರೈತರ ಬಗ್ಗೆ ಕಳಕಳಿಯಿಲ್ಲ. ಕ್ಷೇತ್ರ ಅಭಿವೃದ್ಧಿ ಮಾಡುವ ಬಗ್ಗೆ ಯೋಚನೆಯಿಲ್ಲ .ಕೇವಲ ಜನರಿಗೆ ನಮ್ಮ ಸದಸ್ಯರು ಕಾಂಗ್ರೆಸ್ ಪಕ್ಷದವರು ಕದ್ದುಕೊಂಡು ಹೋಗಿದ್ದಾರೆ ಎಂದು ಪತ್ರಿಕೆ ಹೇಳಿಕೆ ನೀಡುತ್ತಾರೆ.ವೆಂಕಟರಾವ್ ನಾಡಗೌಡ ಸುಳ್ಳಿನ ಸರದಾರ ಕಾಂಗ್ರೆಸ್ ಪಕ್ಷದ ಸದಸ್ಯರ ಬಹುಮತ ಇರುವಾಗ ನಾವೇಕೆ ಜೆಡಿಎಸ್ ಪಕ್ಷದ ಸದಸ್ಯರನ್ನು ಸೆಳೆಯುವ ಪ್ರಯತ್ನ ಮಾಡೋಣ. ಇನ್ನೂ ಮಹಿಳಾ ಒಕ್ಕೂಟದಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಜನರಿಗೆ ದಾರಿ ತಪ್ಪಿಸಿ ನಡೆಯದ ಘಟನೆ ನಡೆದಿದೆ ಎಂದು ಮಹಿಳೆಯರ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತಾರೆ .ಘಟನೆಯ ಪೂರ್ವಾಪರ ವಿಚಾರ ಮಾಡದೆ ಕೆಲವು ಸಂಘಟನೆಗಳು ಮನವಿ ಪತ್ರ ನೀಡಿರುವುದು ದುರ್ದೈವವೇ ಸರಿ ಎಂದು ಹೇಳಿದರು .ಘಟನೆ ನಡೆದು 8ದಿನಗಳ ನಂತರ ಶಾಸಕರ ಕುಮ್ಮಕ್ಕಿನಿಂದ ಕೇಸ್ ದಾಖಲಾಗಿದೆ.ಇವರಿಗೆ ಒಕ್ಕೂಟವನ್ನು ತಮ್ಮ ಕೈಯಲ್ಲಿ ವಶಪಡಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ದಾಖಲೆಗಳ ಸಹಿತ ಮಾಧ್ಯಮದೊಂದಿಗೆ ಬರುವೆ ಎಂದು ತಿಳಿಸಿದರು