ಕಂಪ್ಲಿ-ಕೋಟೆಯಲ್ಲಿ ಮಚ್ಚಿನಿಂದ ಪತ್ನಿಯನ್ನೇ ಕೊಲೆಗೈದ ಪತಿರಾಯ

Share and Enjoy !

Shares
Listen to this article

 

ವಿಜಯನಗರವಾಣಿ
ಬಳ್ಳಾರಿ ಜಿಲ್ಲೆ
ಕಂಪ್ಲಿ:ನ.21. ಕಂಪ್ಲಿ-ಕೋಟೆಯ ದ್ಯಾವಮ್ಮ ಗುಡಿ ಪ್ರದೇಶ ಬಳಿ ಅನೈತಿಕ ಸಂಬಂಧದ ಶಂಕೆಯಿಂದ ಪತಿ ತನ್ನ ಪತ್ನಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಧಾರುಣ ಘಟನೆ ನಡೆದಿದೆ.
ಹೇಮಾವತಿ(ಲಕ್ಷ್ಮಿ)(30) ಮೃತಪಟ್ಟ ದುರ್ಧೈವಿ ದುರುಗಪ್ಪ(38) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಹೆಂಡತಿಯನ್ನು ಕೊಲೆ ಮಾಡಿದ ನಂತರ ಅನೈತಿಕ ಸಂಬಂಧದ ಶಂಕೆಯಿಂದ ಕಾಯಿಗಡ್ಡೆ ರಾಜ ಎಂಬುವರ ಮನೆಗೆ ತೆರಳಿ, ಮಚ್ಚಿನಿಂದ ಹೊಡೆದಿದ್ದಾನೆ. ಗಾಯಗೊಂಡ ರಾಜ ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಹಂಪಿ ಡಿವೈಎಸ್ಪಿ ಎಸ್.ಎಸ್.ಕಾಶಿ, ಸಿಪಿಐ ಸುರೇಶ್ ಹೆಚ್.ತಳವಾರ್, ಪಿಎಸ್ಐ ಮೌನೇಶ್ ಯು.ರಾಥೋಡ್ ಭೇಟಿ ನೀಡಿ ಪರಿಶೀಲಿಸಿನೆ ನಡೆಸಿ ತನಿಕೆನಡೆಸುತ್ತಿದ್ದಾರೆ.

 

Share and Enjoy !

Shares