ವಿಜಯನಗರವಾಣಿ
ರಾಯಚೂರು ಜಿಲ್ಲೆ
ಗಬ್ಬೂರು : ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿಯ ಹೊನ್ನಟಗಿ ಗ್ರಾಮದಲ್ಲಿ ಕೋವಿಡ್ 19 ಹಾಗೂ ಗ್ರಾಮ ಪಂಚಾಯತ್ ನೀತಿ ಸಂಹಿತೆ ಇರುವುದರಿಂದ ಕನಕದಾಸರ ವೃತ್ತದಲ್ಲಿ ಕನಕದಾಸರ ಮೂರ್ತಿಗೆ ಸರಳವಾಗಿ ಗ್ರಾಮದ ಕುರುಬ ಸಮಾಜದ ಮುಖಂಡರು ಸೇರಿ ಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕುರುಬ ಸಂಘ ಜಿಲ್ಲಾಧ್ಯಕ್ಷರಾದ ಅಯ್ಯಪ್ಪ ಗಬ್ಬೂರು ಜಿಲ್ಲಾ ಉಪಾಧ್ಯಕ್ಷರು ,ಮರಿಲಿಂಗ ಬೊಮ್ಮನಾಳ, ದೊಡ್ಡ ಬಸ್ಸಪ್ಪ,ಪ್ರಭು,ಬೊಂಬಾಯಿ ಶರಣಪ್ಪ,ಹೊನ್ನಪ್ಪ,ಬಸವರಾಜ,ಬಾಡದ ಬೂದೇಪ್ಪ,ದೇವರಾಜ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.