ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲಾ
ಲಿಂಗಸೂಗೂರು : ರಾಷ್ಟ್ರ ಮಟ್ಟದಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ ಈ ಹೋರಾಟದಲ್ಲಿ ಭಾಗವಹಿಸಿದ ರೈತರನ್ನು ಕೇಂದ್ರ ಸರ್ಕಾರ ಸರಿಯಾಗಿ ನಡೆದುಕೊಳ್ಳದೆ ರೈತ ಸಂಘಟನೆಗಳ ವಿರುದ್ಧ ದೌರ್ಜನ್ಯ ಎಸಗುತ್ತಿರುವ ಮತ್ತು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ದಿನಾಂಕ:8/12/2020 ರಂದು ಭಾರತ್ ಬಂದ್ ಹಮ್ಮಿಕೊಳ್ಳಲಾಗಿದೆ.
ಈ ಭಾರತ್ ಬಂದ್ ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಲಿಂಗಸೂಗೂರು ತಾಲ್ಲೂಕು ರೈತ ಸಂಘ ಹಸಿರು ಸೇನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಮತ್ತು ಹೋರಾಟವನ್ನು ಬಸವಸಾಗರ ವೃತ್ತದಲ್ಲಿ ಮುಂಭಾಗದಲ್ಲಿ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ರಸ್ತೆ ಮುಖಾಂತರ ಬಸವಸಾಗರ ಸರ್ಕಲ್ ಶ್ರೀರಂಗಪಟ್ಟಣ ಬೀದರ್ ರಾಜ್ಯ ಹೆದ್ದಾರಿ ಬಂದ್ ಮಾಡಿ ಈ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮತ್ತು ಎಸ್ ಎಫ್ ಐ,ಕೆ.ಪಿ.ಆರ್. ಎಸ್, ಆರ್. ಕೆ.ಎಸ್,ಕರುನಾಡು ಸೇನೆ,ಬಿ.ಎಸ್.ಎಫ್,. ಅಂಬೇಡ್ಕರ್ ಸೇನೆ, ಕರ್ನಾಟಕ ಕಾರ್ಮಿಕರ ಸಂಘ, AITUC, ಹಲವಾರು ಸಂಘಟನೆಗಳು ಬೆಂಬಲ ನೀಡಿದರುಬೆಂಬಲ ಸೂಚಿಸಿದವು.