ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ದೇವದುರ್ಗ: (ತಿಂಥಣಿ ಬ್ರಿಡ್ಜ್):
ಪ್ರತಿವರ್ಷ ಜನವರಿ ತಿಂಗಳಲ್ಲಿ ತಿಂಥಣಿ ಬ್ರಿಡ್ಜ್ ಶ್ರೀ ಕನಕಗುರು ಪೀಠದಲ್ಲಿ ಆಚರಿಸಲಾಗುತ್ತಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಕುರಿತು ಶ್ರೀ ಮಠದಲ್ಲಿ ಡಿ.12ರಂದು ಸಭೆ ಕರೆಯಲಾಗಿದೆ.
2021 ಜನವರಿ 12, 13 ಮತ್ತು 14 ರಂದು ‘ಹಾಲುಮತ ಸಂಸ್ಕೃತಿ ವೈಭವ’ ಕಾರ್ಯಕ್ರಮವನ್ನು ಆಚರಿಸುವ ಬಗ್ಗೆ ಚರ್ಚೆಮಾಡಿ ತೀರ್ಮಾನ ಕೈಗೊಳ್ಳಲಾಗುವದು. ಡಿ.12 ರಂದು ಮಧ್ಯಾಹ್ನ 12 ಗಂಟೆಗೆ, ತಿಂಥಣಿ ಬ್ರಿಡ್ಜ್ ಶ್ರೀಮಠದಲ್ಲಿ ಸಭೆಯಲ್ಲಿ ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ, ವಿಜಯಪುರ ಬಳ್ಳಾರಿ, ಕಲಬುರಗಿ, ಬೀದರ ಜಿಲ್ಲೆಗಳ/ತಾಲೂಕ ಗಳಿಂದ ಕುರುಬ ಸಮುದಾಯದ ಮುಖಂಡರು ಪಾಲ್ಗೊಂಡು ಸೂಕ್ತ ಸಲಹೆ ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಕಾಗಿನೆಲೆಯ ಕನಕ ಗುರು ಪೀಠಧ್ಯಕ್ಷರಾದ
ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ಪತ್ರಿಕೆಪ್ರಕಣೆ ಮೂಲಕ ತಿಳಿಸಿದ್ದಾರೆ