ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು .ತಾಲ್ಲೂಕಿನ
2020 ನೇ ಸಾಲಿನ ಗ್ರಾಮ ಪಂಚಾಯತ್ ಚುನಾವಣೆ ಕಾವು ದಿನ ದಿನ ಜೋರಾಗಿದೆ. ನಾ ಮುಂದು ನಿ ಮುಂದು ಎಂದು ಅಭ್ಯರ್ಥಿಗಳು ಅಖಾಡಕ್ಕೆ ಇಳಿದು ಜನ ಸೇವೆ ಮಾಡಲು ಮುಂದಾಗುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿವರೆಗೆ ಎನ್ನುವ ಹಾಗೆ ಗ್ರಾಮ ಪಂಚಾಯತಿ ಎಲೆಕ್ಷನ್ ಕೂಡ ಬಹು ನೀರಿಕ್ಷಿತವಾದದು
ಲಿಂಗಸೂಗೂರು ತಾಲ್ಲೂಕಿನ ಮತ ಕ್ಷೇತ್ರದ ಕಾಳಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯಲಗಲದಿನ್ನಿ ಗ್ರಾಮದಿಂದ್ದ ಮೂರು ಜನ ಅಭ್ಯರ್ಥಿಗಳಾದ
ಶಿವಪ್ಪ ತಂದೆ ಹನುಮಂಪ್ಪ ಹಿರೆಕುರುಬರು ಹನುಮವ್ವ ಗಂಡ ಈರಪ್ಪ ಗಾಳಿಪೂಜೆ
ಉಮಾದೇವಿ ಗಂಡ ಮಲ್ಲಪ್ಪ
ಅವಿರೋಧವಾಗಿ ಆಯ್ಕೆ ಆಗುವದರ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡಲು ಮುಂದಾಗಿದ್ದಾರೆ.
ಯಲಗಲದಿನ್ನಿ ಗ್ರಾಮದ ದೇವಾಲಯ ಮುಂದೆ ಪಟಾಕಿ ಸಿಡಿಸಿ ಬಣ್ಣ ಎರಚುವದರ ಮೂಲಕ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳನ್ನು ಗ್ರಾಮದ ಹಿರಿಯ ಮುಖಂಡರು ಹಾಗೂ ಅನೇಕರು ಸೇರಿ ಸನ್ಮಾನಿಸಿ ಸಂಭ್ರಮಾಚರಣೆ ಮಾಡಿದ್ದರು.
ನಂತರ ಆಯ್ಕೆಯಾದ ಅಭ್ಯರ್ಥಿಗಳು ಮಾತನಾಡಿ ಸರ್ಕಾರದಿಂದ ಬರುವ ಎಲ್ಲ ಯೋಜನೆಗಳನ್ನು ಪ್ರತಿಯೊಂದು ಮನೆ ಮನೆಗೆ ತಲುಪಿಸುವ ಮೂಲಕ ನಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿ ತೋರಿಸುತ್ತೇವೆ ಎಂದು ಊರಿನ ಗುರು ಹಿರಿಯ ಸಮೂಕದಲ್ಲಿ ಹೇಳಿದ್ದರು.
ಈ ಸಂದರ್ಭದಲ್ಲಿ ಅಮ್ರತಯಸ್ವಾಮಿ ಶರಣಪ್ಪ ಶಳಗ್ಗಿ ಬಸಪ್ಪ ಕರಿಯಮನ್ವರ ಬಸಪ್ಪ ಅಮರೇಗೌಡ ಅಮರೇಶಗೌಡ ಮಲ್ಲನಗೌಡ ರಾಮನಗೌಡ ಗಿರಿಯಮ್ಮ ನ್ವರ ಶರಣಪ್ಪ ಬಸಣ್ಣ ಶಳಿಗಿ ಹನುಮಂತ ಪೂಜಾರಿ ಅಮರಪ್ಪ ಕಟ್ಟಾಲಿ ನಾಗಪ್ಪ ಜಂತಾಪುರ ಮರಿಯಪ್ಪ ಮಲ್ಲಪ್ಪ ನಾಗಪ್ಪ ಲಿಂಗಪ್ಪ ಹನಮಪ್ಪ ನಾಗಪ್ಪ
ಬಾಲಪ್ಪ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ನಾಗಿರೆಡ್ಡಿ ಹಾಗೂ ಊರಿನ ಗುರು ಹಿರಿಯರು, ಯುವಕ ಮಿತ್ರರು ಇದ್ದರು