ಮುಕ್ಕುಂದ ಗಾಮ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಭಾರಿ ಪೈಪೋಟಿ. ವಿಜಯನಗರ ವಾಣಿ ಸುದ್ದಿ:

Share and Enjoy !

Shares

 

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ..

ಸಿಂಧನೂರು: ಮುಕ್ಕುಂದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಭಾರಿ ಪೈಪೋಟಿ .ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ .
ತಾಲ್ಲೂಕಿನ ಮುಕುಂದ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು ಒಟ್ಟು ನೂತನ ವಾಗಿ 23 ಗ್ರಾಪಂ ಸದಸ್ಯರು ಗ್ರಾಮ ಪಂಚಾಯಿತಿಗೆ ಆಯ್ಕೆಗೊಂಡಿದ್ದು .ಅದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಾಲಾಕ್ಷಿಗೌಡ ಹಾಗೂ ಸಣ್ಣ ಯಶೋದಾ ಸ್ಪರ್ಧೆ ಮಾಡಿದ್ದರೆ .
ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಮಾರಮ್ಮ ಹಾಗೂ ಲಲಿತಮ್ಮ ಸ್ಪರ್ಧೆ ಮಾಡಿದ್ದಾರೆ ಎಂದು ಚುನಾವಣೆ ಅಧಿಕಾರಿಯಾದ ಮಹಾಲಿಂಗಪ್ಪ ಇಂಗಳದಾಳ್ ತಿಳಿಸಿದ್ದಾರೆ .ನಾಮಪತ್ರ ಹಿಂಪಡೆಯಲು ಮಧ್ಯಾಹ್ನ 2ಗಂಟೆವರೆಗೆ ಕಾಲಾವಕಾಶ ಇದೆ .ಒಂದು ವೇಳೆ ನಾಮಪತ್ರ ಹಿಂಪಡೆಯದೆ ಇದ್ದರೆ ಮಧ್ಯಾಹ್ನ 2:30 ಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು .
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ಬಂದ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಗ್ರಾಮೀಣ ಠಾಣೆಯ ಪಿಎಸೈ ರಾಘವೇಂದ್ರ ಅವರು ಪಂಚಾಯಿತಿಯ ಮುಂದೆ ಭದ್ರತೆ ಕಲ್ಪಿಸಲು ಕಲ್ಪಿಸಿದ್ದಾರೆ

Share and Enjoy !

Shares