ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸಗೂರು : ಕೊರೊನಾ ಅಟ್ಟಹಾಸದಿಂದಾಗಿ ಸುಮಾರು ಹತ್ತು ತಿಂಗಳಿಂದ ಟಾಕೀಸುಗಳಲ್ಲಿ ಸಿನಿಮಾ ವೀಕ್ಷಿಸುವ ಅವಕಾಶ ಸಿಗದೆ ನಿರಾಶರಾಗಿದ್ದ ಸಿನಿಮಾ ಪ್ರಿಯರು ಸರಕಾರ ನಿರ್ಬಂಧ ಸಡಿಲಿಸಿದ ಬಳಿಕ ಇಂದು ಚಿತ್ರಮಂದಿರಗಳಗೆ ಮುಗಿಬಿದ್ದರು. ಶುಕ್ರವಾರ ಪಟ್ಟಣದ ಎಂಪಾಯರ್ ಚಿತ್ರಮಂದಿರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ನಟ ಗೋವಿಂದ್ ನಟಿಸಿರುವ ಚಿತ್ರ ಗತ್ತು ಸಿನಿಮಾ ಬಿಡುಗಡೆ ಕಾರ್ಯಕ್ರಮವನ್ನ ಶ್ರೀ ವಿಜಯಮಹಾಂತೇಶ್ವರ ಸ್ವಾಮೀಜಿ ರವರು ನೆರವೇಸಿದರು.ಸಿನಿ ಪ್ರೀತಿಯರು ಥಿಯೇಟರ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ಜೈಕಾರ ಕೂಗುತ್ತಾ ಸಿನೆಮಾ ಮಂದಿರವನ್ನು
ಪ್ರೇಕ್ಷಕರು ಬೆಳಿಗ್ಗೆಯಿಂದಲೇ ಟಿಕೆಟ್ಗಾಗಿ ಸರತಿ ಸಾಲಿನಲ್ಲಿ ನಿಂತು ಸಿನಿಮಾ ಟಿಕೆಟ್ ತೆಗೆದುಕೊಂಡು
ಎಲ್ಲಾ ಶೋ ಗಳು ಥಿಯೇಟರ್ ಫುಲ್ ಆಗಿಸುವ ಮೂಲಕ ಕಲ್ಯಾಣ ಕರ್ನಾಟಕದ ಗತ್ತು ಸಿನಿಮಾಗೆ ಸಿನಿಪ್ರೀಯರು ಗತ್ತು ಹೆಚ್ಚಿಸಿದ್ದಾರೆ.