ರಾಯಚೂರು.ಫೆ.9.ಭಗತ್ ಸಾಂಸ್ಕೃತಿಕ ಸೇವಾ ಸಂಘ ರಾಯಚೂರು ಹಾಗೂ ರಂಗಾಯಣ ಕಲ್ಬುರ್ಗಿ ವತಿಯಿಂದ ಎರಡು ದಿನಗಳ ನಾಟಕ ಪ್ರದರ್ಶನ ಅಮ್ಮಿಕೊಳ್ಳಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ ವಿ.ಎನ್.ಹಕ್ಕಿ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಫೆ.11ರಂದು ಸಂಜೆ 6ಕ್ಕೆ ನಗರ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಗತ್ ಸಾಂಸ್ಕೃತಿಕ ಸೇವಾ ಸಂಘ ಹಾಗೂ ರಂಗಾಯಣ ಕಲ್ಬುರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ರಂಗ ನಿರ್ದೇಶನ ಮಹದೇವ ಅವರ ಸೀರಿಪುರಂದರ ಪ್ರದರ್ಶನ ನಡೆಯಲಿದ್ದು ಫೆ.12 ರಂದು ವಿಶ್ವರಾಜ ಪಾಟೀಲ್ ಅವರು ನಿರ್ದೇಶಿಸಿದ ಶ್ರೀನಿವಾಸ ವೈದ್ಯರ ಮೂಲ ಕಥೆ ಅದರಿಂತ ತ್ರಯಸ್ಥ ನಾಟಕ ಪ್ರದರ್ಶನವನ್ನು ಮಾಡಲಿದ್ದು ಎಲ್ಲರಿಗೂ ಉಚಿತ ಪ್ರವೇಶ ಇದ್ದು ಸರ್ವಜನಿಕರು ವೀಕ್ಷಿಸಲು ಕೋರಿದರು.
ಈ ಸಂದರ್ಭದಲ್ಲಿ ಶರಣಪ್ಪ ಸಿಂಧನೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.