ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸ್ಗೂರು: ತಾಲೂಕಿನ ಕಾಳಾಪುರ. ಗ್ರಾಮದ ಹತ್ತಿರ ಜೇನುಹುಳಗಳು ದಾಳಿಯಿಂದ
10.ಕ್ಕೊ ಹೆಚ್ಚಿನ ಜನ ಗಾಯಗೊಂಡಿರುವ ಘಟನೆ ಜರುಗಿದೆ ತಾಲೂಕಿನ ಕಾಳಾಪುರ ಗ್ರಾಮದ ಹತ್ತಿರ ಶನಿವಾರ ಮಧ್ಯಾಹ್ನ ನಡೆದಿದೆ.
ಲಿಂಗಸುಗೂರಿನಲ್ಲಿ ಶನಿವಾರದ ಸಂತೆ. ಮುಗಿಸಿಕೊಂಡು ತಮ್ಮ ಸ್ವಗ್ರಾಮ ಪೂಲಭಾವಿಗೆ ಟಾಟಾ ಎಸಿ ವಾಹನದಲ್ಲಿ ತೆರಳುವಾಗ ಘಟನೆ ಜರುಗಿದ್ದು
ಜೇನುಹುಳಗಳು ದಾಳಿ ನಡೆಸಿದ ಪರಿಣಾಮ ಜನರು ಗಾಯಗೊಂಡಿದ್ದು . ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ತೆರಳಿದ್ದಾರೆ ಕಾಳಾಪುರ ಗ್ರಾಮದ ಹತ್ತಿರ ಇರುವ . ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆದ ಸೇತುವೆ ಮೇಲೆ ಜೇನು ಹುಳಗಳು ಗುಂಪು ..ಹಾರಾಡಿದ್ದು ವಾಹನ ಬರುತ್ತಿರುವಂತೆ ಅಲ್ಲಿ ದ್ದ ಬರುತ್ತಿದ್ದ ಜನರ ಮೇಲೆ ಹಾಗೂ ವಾಹನ ಸವಾರ ಮೇಲೆ ದಾಳಿ ಮಾಡಿದವು.ಈ ದಾಳಿಯಲ್ಲಿ .ಪೂಲಭಾವಿ ಗ್ರಾಮದ ಆದಪ್ಪ ಹುಲಗಪ್ಪ ಹನುಮನಗೌಡ ಇನ್ನಿತರೆ ಜನರ ಮೇಲೆ ಜೇನುನೊಣ ದಾಳಿ ಮಾಡಿರುವುದು ಕಂಡುಬಂದಿದೆ