ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು:ಪಟ್ಟಣದ ಹುಲಿಗುಡ್ಡ18 ನೇ ವಾಡ೯ ಶ್ರೀಶಿವಶರಣೆ ಹೇಮರೆಡ್ಡಿ ಮಲ್ಲಮ್ಮ 599ನೇ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಿದರು ಈಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಚೆನ್ನರೆಡ್ಡಿ ಬಿರಾದಾರ ಇವರು ಮಾತಾನಾಡಿ ಮಲ್ಲಮ್ಮಳು 15ನೇ ಶತಮಾನದಲ್ಲಿ ಬಾಳು ಬದುಕಿದ ತಪ್ಪಸ್ಪಿನಿ ಎಂದು ತಿಳಿಸಿದರು ಇಡೀ ಮಾನವನ ಕೂಲಕ್ಕೆ ಮಾರ್ಗದರ್ಶಕಳಾದ ಧೀಮಂತ ಮಹಿಳೆ ಶ್ರೀ ಶೈಲ ಮಲ್ಲಿಕಾರ್ಜುನನ್ನು ತನ್ನ ಆರಾಧ್ಯ ದೈವವಾಗಿ ಆರಾಧಿಸಿ ಆವರನ್ನು ಸಾಕ್ಷಾತ್ತಾಗಿ ಕರೆಯಿಸಿಕೊಂಡಳು ಇಡೀ ವಿಶ್ವ ಕ್ಕೆ ತನ್ನ ದೈವ ಭಕ್ತಿ ಯನ್ನು ತೋರಿಸಿ ಕೊಟ್ಟವಳು ಈ ಶ್ರೀ ಹೇಮರೆಡ್ಡಿ ಮಲ್ಲಮ್ಮ ಎಂದು ತಿಳಿಸಿದರು ಒಬ್ಬ ಗೃಹಿಣಿಯಾಗಿ ಸಮಾಜಕ್ಕೆ ಉತ್ತಮ ಕೊಡುಗೆಗಳು ನೀಡಿದ್ದಾರೆ ಅವರ ಜೀವನ ತತ್ವಾದರ್ಶಗಳು ಇಂದಿಗೂ ಜನ ಜೀವನದಲ್ಲಿ ಕಾಣಸಿಗುತ್ತವೆ ಮತ್ತು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನೀವು ಎಲ್ಲರೂ ನಡೆಯಬೇಕೆಂದು ಶಿಕ್ಷಕರಾದ ಕಾಳಪ್ಪ ಬಡಿಗೇರ ಮಾತನಾಡಿದರು
ಈಸಂದರ್ಭದಲ್ಲಿ ಮುಖಂಡರುಗಳಾದ ಸಿದ್ದಪ್ಪ ಚೆನ್ನರಕಾರ,ಯಲ್ಲನಗೌಡ, ನಿರುಪಾದೀಸ್ವಾಮಿ,ನಾಗರಾಜ್ನರಗುಂದ, ಪ್ರಕಾಶ್ ರೆಡ್ಡಿ, ರಾಜಶೇಖರ, ಶಿವಲಿಂಗಪ್ಪ ವಕೀಲರು ರವಿ ಬೋವಿ, ರಂಗಪ್ಪಬೋವಿ,ರಾಜು, ಅಮರೇಶ ನಾಯಕ, ದೊಡ್ಡನಗೌಡ ಪಾಟೀಲ್, ಕರಸ್ತಳಿಪ್ಪ,ಇತರರು ಇದ್ದರು