ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ರಾಯಚೂರು ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ನಿರಂತರವಾಗಿ ದುರ್ಬಲ ಮತ್ತು ಆಸಾಹಾಯಕ ಕುಟುಂಬಗಳ ಸಾಹಯಕ್ಕೆ ಹಗಳಿರಳು ಶ್ರಮಿಸುತ್ತಿದೆ.ಅಂದಹಾಗೆ ಬಿಸಿಲನಾಡು ರಾಯಚೂರು ಜಿಲ್ಲೆಯ ದೇವಸ್ಗೂರ್ ,ಲೇಬರ್ ಕಾಲೋನಿ, ಜನತಾ ಕಾಲೋನಿ ,ಕುಕನೂರ್ ಎಗ್ಗಸನಹಳ್ಳಿ,ಕೋರ್ಥಕುಂದಾ ಗ್ರಾಮಗಳಲ್ಲಿ ಸೂಕ್ತ ಬಡ ಮತ್ತು ಅಸಾಹಾಯಕ ನಿರ್ಗತಿಕ ಕುಟುಂಬಗಳಿಗೆ ಆಯ್ದು 25ಕಿಂತ ಹೆಚ್ಚು ಕುಟುಂಬಗಳಿಗೆ ದಿನಸಿ ಕೀಟ ವಿತರಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಅಧ್ಯಕ್ಷರಾದ ಧರ್ಮಾಧಿಕಾರಿ ಪೂಜ್ಯ ಡಾ// D ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಬಡವರು ಹಸಿವಿನಿಂದ ಬಳುವುದನ್ನು ತಪ್ಪಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.ರಾಜ್ಯಧ್ಯಾಅಂತ 350 ವಾಹನಗಳನ್ನು ಕೋವಿಡ್ ಸೋಂಕಿತ ರೋಗಿಗಳಿಗೆ ಮನೆಗೆ ಮತ್ತು ಆಸ್ಪತ್ರೆಗೆ ತಿರುಗಾಡಲು ಉಚಿತವಾಗಿ ಅನುಕೂಲ ಮಾಡಿಕೂಡಲಾಗಿದೆ.
ರಾಜ್ಯದ ಮೈಸೂರು, ಬೆಳ್ತಾoಗಡಿ ,ಮತ್ತು ಧಾರವಾಡ ಕ್ಷೇತ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದ್ದು , ಸಾರ್ವಜನಿಕರು ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅನಿಲ್ ಮೇಲ್ವಿಚಾರಕರು , ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.