ರೈತ ನಿಂದ 48.500 ರೂ ಹಣವನ್ನು ದೋಚಿ ಪರಾರಿಯಾದ ಅನಾಮಿಕ ಯುವಕರು.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು: ಅನಾಮಿಕ ಇಬ್ಬರು ಯುವಕ ರಿಂದ ರೈತನ ದುಡು ದೋಚಿ ಪರಾರಿ ಯಾದ ಘಟನೆ ನಡೆದಿದೆ.
ಮಲ್ಕಾಪೂರ ಗ್ರಾಮದ ಪಂಪಣ್ಣ ಎನ್ನುವ ಸುಮಾರು 60 ವರ್ಷದ ರೈತನು ತಾಲ್ಲೂಕಿನ ಗೊರೇಬಾಳ ಗ್ರಾಮದಿಂದ ಭತ್ತ ಮಾರಿದ (ನೆಲ್ಲ ಪಟ್ಟಿ) ಹಣವನ್ನು ತೆಗೆದುಕೊಂಡು ಬೆಳಗ್ಗೆ 8:20 ಸುಮಾರಿಗೆ ಗಂಟೆಗೆ ಶ್ರೀಪುರಂ ಜಂಕ್ಷನ್ ನಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು.
ಎಕ್ಸೆಲ್ ಸೂಪರ್ ಬೈಕ್ ಮಲ್ಕಾಪುರ ಗ್ರಾಮಕ್ಕೆ ಪುನಃ
ತೆರಳುತ್ತಿರುವಾಗ ಈ ಇಬ್ಬರು ಅನಾಮಿಕ ಯುವಕರು
ಶೈನ್ ಗಾಡಿ ಮೂಲಕ ರೈತನ ಫಾಲೋ ಮಾಡಿ.
ಸಾಸಲಮರಿ ಗ್ರಾಮ ಹತ್ತಿರ ಬರುತ್ತಿದ್ದಂತೆ ರೈತನನ್ನು ತಡೆದು.ಅಧಿಕಾರಿಗಳ ರೀತಿಯಲ್ಲಿ ನೀನು ಗಾಂಜಾ ಸಾಗಾಣಿಕೆ ಮಾಡುತ್ತಿದ್ದು ನಿನ್ನನ್ನು ತಪಾಸಣೆ ಮಾಡಬೇಕು ಎಂದು ಬೆದರಿಸಿ ರೈತನ ಬಳಿ ಇರುವ 48.500 ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

Share and Enjoy !

Shares