ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು ; ರಾಯಚೂರು ಜಿಲ್ಲಾ ಘಟಕ ಹಾಗೂ ಮಹಿಳಾ ಘಟಕ ಲಿಂಗಸುಗೂರು ತಾಲೂಕ ಘಟಕ ಹಾಗೂ ಮಹಿಳಾ ಘಟಕ ವತಿಯಿಂದ ಮುದಗಲ್ ಪಟ್ಟಣದ ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗೆ ಆಹಾರ ಪದಾರ್ಥಗಳ ದಿನಿಸಿ ಕಿಟ್ ಗಳನ್ನೂ ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ವಿತರಣೆ ಮಾಡಿದರು,
ಇದೆ ವೇಳೆ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ: ಶರಣಪ್ಪ ಆನೆಹೊಸೂರು ಮಾತನಾಡಿ ಲಿಂಗಸುಗೂರು ತಾಲೂಕಾದ್ಯಂತ
ನಿರ್ಗತಿಕ 100 ಜಾನಪದ ಕಲಾವಿದರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗುವದು ಎಂದು ಹೇಳಿದರು,
ಇದೆ ಸಂದರ್ಭದಲ್ಲಿ ಪಿಎಸೈ ಡಾಕೇಶ ಉಪ್ಪಾರ, ಡಾ:ಅಮರಗುಂಡಪ್ಪ ಪುರಸಭೆ ಅಧ್ಯಕ್ಷೆ ಅಮೀನಾ ಬೇಗ ಬಾರಿಗಿಡ, ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀದೇವಿ ನಡುಲಮನಿ ಶಿವಮ್ಮ ಪಟ್ಟದಕಲ್, ತಾಲೂಕಾಧ್ಯಕ್ಷ ಮಹೇಂದ್ರ ಕರ್ಡಿ, ಧಾರ್ಮಿಕ ಇಲಾಖೆ ನಿರ್ದೇಶಕ ಹರ್ಷ ಮುತಾಲಿಕ, ಮುಖ್ಯಾಧಿಕಾರಿ ಮರಿಲಿಂಗಪ್ಪ, ಶಶಿಕಲಾ ಬೋವಿ ಸೇರಿದಂತೆ ಮುಂತಾದವರು ಇದ್ದರು,