ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸುಗೂರ ; ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನೋಂದಾಯಿತ ಕಾರ್ಮಿಕರಿಗೆ ಆಹಾರ ಸಾಮಾಗ್ರಿ ಕಿಟ ವಿತರಿಸಲಾಯಿತು ಆದರೆ ಕರೋನ್ 2 ನೇ ಅಲೆಯ ಸಂಪೂರ್ಣ ಲಾಕಡೌನ್ ಮುಗಿದು ಒಂದು ವಾರ ಕಳೆದಿಲ್ಲಾ ಇನ್ನೂ ಸರ್ಕಾರದಿಂದ ಕರೋನ್ ಮಹಾಮಾರಿಯ ರೋಗವನ್ನು ನಿಯಂತ್ರಿಸಲು ಸರ್ಕಾರದಿಂದ ಕೆಲವು ಮಾನದಂಡಗಳು ಜಾರಿಯಲ್ಲಿದೆ ಆದರೂ ಇಂದು ಲಿಂಗಸುಗೂರ ಎ. ಪಿ.ಎಂ.ಸಿ. ಆವರಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನೋಂದಾಯಿತ ಕಾರ್ಮಿಕರಿಗೆ ಲಿಂಗಸುಗೂರ ತಾಲ್ಲೂಕಿನಲ್ಲಿ 5000 ಆಹಾರ ಸಾಮಾಗ್ರಿ ಕಿಟ್ ಬಂದಿದ್ದು ಅದನ್ನು ಕಾರ್ಮಿಕರಿಗೆ ವಿತರಣೆ ಮಾಡುವಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಂಪೂರ್ಣ ವಾಗಿ ಕೋವಿಡ 19 ರ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಸುಮಾರು ನೂರಾರು ಜನರು ಯಾವುದೇ ಸಾಮಾಜಿಕ ಅಂತರವಿಲ್ಲದೆ ಮಾಸ್ಕ್ ಧರಿಸದೆ ಆಹಾರ ಕಿಟ ಪಡೆಯಲು ಧವಿಸಿದ್ದು ತಜ್ಞರ ಪ್ರಕಾರ ಕರೋನ್ 3 ನೇ ಅಲೆ ಬರುವುದು ಸಧ್ಯದಲ್ಲಿ ಬರುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ ಸರ್ಕಾರ ಕೊಡ ಗಂಭೀರವಾಗಿ ಪರಿಗಣಿಸಿದೆ ಆದರೆ ಲಿಂಗಸುಗೂರ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೋವಿಡ 19 ನಿಯಮ ಉಲ್ಲಂಘಿಸಿದ್ದು ಸಂಬಂಧಿಸಿದಂತ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡೋಣ.