ವಿಜಯನಗರ ವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ನಾಗರಹಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೋಮನಗೌಡ ಪಾಟೀಲ್ ಲೆಕ್ಕಿಹಾಳ ರವರನ್ನು ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ ಉಪಕಾರ್ಯದರ್ಶಿ ರವರು ಲಿಂಗಸುಗೂರು ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರಾಗಿ ( ಗ್ರಾಮೀಣ ಉದ್ಯೋಗ ) ಮುಂಬಡ್ತಿ ನೀಡಿ ಆದೇಶ ನೀಡಿದ ಹಿನ್ನಲೆಯಲ್ಲಿ ಮುದಗಲ್ ಪಟ್ಟಣ ಸಮೀಪದ ಸಜ್ಜಲಗುಡ್ಡದ ದೊಡ್ಡಬಸವಾರ್ಯ ಶ್ರೀಗಳು,ಗ್ರಾಮಸ್ಥರು,ಪ್ರೌಢಶಾಲೆಯ ಮುಖ್ಯಗುರುಗಳು ಸನ್ಮಾನ ಮಾಡಿದರು,
ಹಾಗೂ ಇದೆ ವೇಳೆ ಪ್ರಥಮವಾಗಿ ಖೈರವಾಡಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ವೇಳೆ ಬಿಜೆಪಿ ಯುವ ಮುಖಂಡ ವೆಂಕಟೇಶ ನಾಯಕ, ಪ್ರೌಢ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ಆರ್, ನಾಯಕ, ಸದಸ್ಯರಾದ ಶರಣಬಸವ ಮುರಾಳ, ಭೀಮಣ್ಣ ಭಜಂತ್ರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ರಾಮಪ್ಪ, ಜಗದೀಶ, ಮಹಾಂತೇಶ ಭಜಂತ್ರಿ, ಕಾರ್ಯದರ್ಶಿ ನಾಗಪ್ಪ ಬನ್ನಿಗೋಳ ಸಿಬ್ಬಂದಿ ದೇವಪ್ಪ ಭೋಗಾಪುರು, ಸೇರಿದಂತೆ ಮುಂತಾದವರು ಇದ್ದರು,