ವಿಜಯನಗರ ವಾಣಿ ಸುದ್ದಿ ರಾಯಚೂರು ಜಿಲ್ಲೆ
ವರದಿ : ಬಸಲಿಂಗಪ್ಪ ಭಜಂತ್ರಿ
ಲಿಂಗಸೂಗೂರು ; ಕೆ, ಬಿ, ಜೆ, ಎನ್, ಎಲ್ ಅಧಿಕಾರಿಗಳ ನಿರ್ಲಕ್ಷದಿಂದ ರಾಂಪುರು ಏತ ನೀರಾವರಿ ಕಾಲುವೆಯ ನೀರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಾಳಾಪೂರು ಗ್ರಾಮ ಪಂಚಾಯತ ವ್ಯಾಪ್ತಿಯ ಐದನಾಳ ಗ್ರಾಮಕ್ಕೆ ನುಗ್ಗುವೆ,
ರಾಂಪುರು ಏತ ನೀರಾವರಿಯ ಕಾಲುವೆ ಚಿಕ್ಕಾದಾಗಿದ್ದು ಕಾಲುವೆ ತುಂಬಾ ಜಾಲಿ ಬೆಳೆದಿದ್ದು ಹಾಗೂ ಮಣ್ಣು ಕೂಡ ತುಂಬಿದೆ ಅನೇಕ ಬಾರಿ ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಜಂಗಲ್ ಕಟಿಂಗ್ ಹಾಗೂ ಮಣ್ಣು ತಗೆಯುವಂತ್ತೆ ಈ ಭಾಗದ ರೈತರು ಮನವಿ ಮಾಡಿದರು ಯಾವುದೆ ಪ್ರಯೋಜನವಾಗಿಲ್ಲ ಎಂಬ ಆರೋಪದ ಮಾತು ಕೇಳಿ ಬರುತ್ತಿದ್ದೆ,
ಅಧಿಕಾರಿಗಳು ಈಗ ರಾಂಪುರು ಏತ ನೀರಾವರಿಯ ಕಾಲುವೆ ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಕಾಳಾಪುರು ಗ್ರಾಮ ಪಂಚಾಯತ ವ್ಯಾಪ್ತಿಯ ಐದನಾಳ ಗ್ರಾಮಕ್ಕೆ ನೀರು ನುಗ್ಗುವೆ,
ನೀರು ಗ್ರಾಮಕ್ಕೆ ನುಗಿದ್ದರಿಂದ ರಸ್ತೆ ಮೇಲೆ ಹರಿಯುವರಿಂದ ಗ್ರಾಮಸ್ಥರಿಗೆ ಸಂಚಾರ ಮಾಡಲು ಕೂಡ ತುಂಬಾ ತೊಂದರೆಯಾಗಿದೆ ರಾಂಪುರು ಏತ ನೀರಾವರಿಯ ನೀರು ಪೋಲಾಗಲು ಕಾಣೀಭೂತರಾದ ಸಂಭಂದಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳಬೇಕು ಎಂದು ಒತ್ತಾಯ ಮಾಡಿದರು,