ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ದೇವದುರ್ಗ:- ಜಿಲ್ಲೆಯ ಪ್ರಭಾವಿ ನಾಯಕ ಅನುಭವಿ ರಾಜಕಾರಣಿ,ಹಿಂದುಳಿದ ವರ್ಗಗಳ ಹರಿಕಾರ,ಕೋವಿಡ ಸಂದರ್ಭದಲ್ಲಿ ಲಕ್ಷಾಂತರ ಜನರ ಹಸಿವನ್ನು ನೀಗಿಸಿದ ಅನ್ನಬ್ರಹ್ಮ ಸಾವಿರ ಕೋಟಿ ಅನುದಾನವನ್ನ ಹೋದ ಬಜೆಟ್ ನಲ್ಲಿ ತಂದು ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ದೇವದುರ್ಗ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಧೀಮಂತ ನಾಯಕ ನಾಲ್ಕು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿ ಕೂಡ ಸಾಕಷ್ಟು ಕೆಲಸಗಳು ಸಹ ಮಾಡಿದ್ದಾರೆ. ಇಂಥ ಅನುಭವಿ ರಾಜಕಾರಣಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು *ದೇವದುರ್ಗ ತಾಲೂಕಿನ ಮಡಿವಾಳ ಸಮಾಜದ ಬಿಜೆಪಿ ಮುಖಂಡರ ವತಿಯಿಂದ* ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾದ *ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ* ಅವರಿಗೆ ಮತ್ತು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲು ಹಾಗೂ ಮಾಜಿ ಮುಖ್ಯಮಂತ್ರಿಗಳಾದ *ಸನ್ಮಾನ್ಯ ಶ್ರೀ ಬಿಎಸ್ ಯಡಿಯೂರಪ್ಪ* ವರಿಗೆ ಆಗ್ರಹಿಸಿಲಾಯಿತು. ಮಡಿವಾಳ ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡುವುದರ ಜೊತೆಗೆ ತಾಲೂಕಿನಲ್ಲಿ *ಮಡಿವಾಳ ಸಮಾಜಕ್ಕೆ 10 ಗುಂಟೆ ಜಾಗ ಹಾಗೂ 25 ಲಕ್ಷ ಮೊತ್ತದಲ್ಲಿ ಸಮುದಾಯ ಭವನ, ನೀಡಿದ್ದಾರೆ.*
ಮಡಿವಾಳ ಸಮಾಜದ ಸಾಮಾನ್ಯ ಕಾರ್ಯಕರ್ತನನ್ನು ಪ್ರಖ್ಯಾತ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಬಸವರಾಜ್ ಕೊಪ್ಪರ್ ನಾಮನಿರ್ದೇಶನ ಮಾಡಿದ್ದಾರೆ. ಜಿಲ್ಲಾ ಮಹಿಳಾ ಮೋರ್ಚಾ ಬಿಜೆಪಿ ಉಪಾಧ್ಯಕ್ಷರಾಗಿ ಸಾಮಾನ್ಯ ಕಾರ್ಯಕರ್ತಿ ಜಯಲಕ್ಷ್ಮಿ ನೇಮಕ, ಮೂಷ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಂಗಪ್ಪ ಮಡಿವಾಳ ಸ್ಥಾನಮಾನ,ಹಿಂದುಳಿದ ವರ್ಗಗಳ ತಾಲೂಕ ಬಿಜೆಪಿ ಅಧ್ಯಕ್ಷರಾಗಿ ಲಿಂಗಯ್ಯ ಸುಣ್ಣದಕಲ್ ಹೀಗೆ ಅನೇಕ ರೀತಿಯಲ್ಲಿ ರಾಜಕೀಯ ಸ್ಥಾನಮಾನ ನೀಡುವುದರ ಜೊತೆಗೆ ಮಡಿವಾಳ ಸಮಾಜಕ್ಕೆ ಕೊಡುಗೆ ನೀಡಿದ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಕೆ.ಶಿವನಗೌಡ ನಾಯಕರಿಗೆ
ಸಚಿವ ಸ್ಥಾನ ನೀಡಲೇ ಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಂಗಪ್ಪ ಮೂಷ್ಟೂರು,ಲಿಂಗಯ್ಯ ಸುಣ್ಣದಕಲ್,ಬಸವರಾಜ್ ಕೊಪ್ಪರ್,ಜಯಲಕ್ಷ್ಮಿ ಮಡಿವಾಳ,ಎಚ್.ಮಾಹದೇವ ಮಡಿವಾಳ,ಹನುಮಂತ ಜಾಲಹಳ್ಳಿ, ನಿಂಗು ಕಟಿಗೇರ ಅಮರೇಶ ಮಡಿವಾಳ, ಮೌನೇಶ ಮಾನಸಗಲ್, ಹನುಮಂತ ಜಾಲಹಳ್ಳಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.