ಕುರುಗೋಡು ಪೊಲೀಸರಿಂದ ಮಿಂಚಿನ ದಾಳಿ ಮನೆ ಬೀಗ ಮುರಿದು ಹಣ ಮತ್ತು ಆಭರಣ ದೋಚಿ ಪರಾರಿಯಾಗಿದ್ದಆರೋಪಿಗಳು ಪತ್ತೆ.

Share and Enjoy !

Shares

ಕುರುಗೋಡು. ಆ.4ಕಳೆದ ದಿನಗಳ ಹಿಂದೆ ಕುರುಗೋಡು ತಾಲೂಕು ಬಾದನಹಟ್ಟಿ ಗ್ರಾಮ ಮತ್ತು ವದ್ದಟ್ಟಿ ಗ್ರಾಮದಲ್ಲಿ ಮನೆ ಬೀಗ ಮುರಿದು ಹಣ ಹಾಗೂ ಹೊಡೆವಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಕುರುಗೋಡು ತಾಲೂಕಿನ ವದ್ದಟ್ಟಿ ಗ್ರಾಮದಲ್ಲಿ 30/3/21 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ 7,63,000 ಬೆಲೆಯ ಸುಮಾರು 21 ತೊಲೆ 2 ಗ್ರಾಮ ಬಂಗಾರದ ಆಭರಣ ಮತ್ತು 10,5000 ನಗದು ಹಣವನ್ನು ದೋಚಿರುತ್ತಾರೆ. ಅದಲ್ಲದೆ ಬಾದನಹಟ್ಟಿ ಗ್ರಾಮದಲ್ಲಿ 12/7/21 ರಂದು ಮನೆ ಬೀಗ ಮುರಿದು 4,37,500 ಬೆಲೆಯ ಸುಮಾರು 12/2 ತೊಲೆಯ ತೂಕದ ಬಂಗಾರ ಆಭರಣ ಗಳು ಹಾಗೂ 1,50,000 ನಗದು ಹಣವನ್ನು ಕಳ್ಳತನ ಮಾಡಿ ಪರಾರಿ ಯಾಗಿದ್ದಾರೆ ಎಂದು ಫಿರ್ಯಾದಿದಾರರು ನೀಡಿದ ಈ ದೂರಿನ ಮೇರೆಗೆ ಕುರುಗೋಡು ಪೊಲೀಸ್ ರು ಜಿಲ್ಲಾ ವರಿಷ್ಟಧಿಕಾರಿ ಸೈದುಲ್ಲಾ ಅದಾವತ್, ಆಡಿಷನಲ್ ಎಸ್ಪಿ ಲಾವಣ್ಯ,ಡಿ, ವೈ, ಎಸ್ಪಿ, ಸತ್ಯನಾರಾಯಣ ಅವರ ನೇತೃತ್ವದಲ್ಲಿ ಪ್ರಕರಣ ವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿ ಆರೋಪಿ ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳತನ ಮಾಡಿದ ಆರೋಪಿ ಶ್ರೀಕಾಂತ್ (26) ವರ್ಷ ಬಳ್ಳಾರಿ,
ರೇಣುಕಪ್ಪ ( 24) ವರ್ಷ ಬಾದನಹಟ್ಟಿ,
ಗಾದೆಪ್ಪ (33) ವರ್ಷ ವದ್ದಟ್ಟಿ ಗ್ರಾಮದವರಗಿದ್ದಾರೆ.
ಇವರು ಇಬ್ಬರು ವ್ಯವಸಾಯ ಕೆಲಸ ಮಾಡಿದ್ರೆ ಇನ್ನೊಬ್ಬ ಡ್ರೈವರ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕುರುಗೋಡು ಸಿಪಿಐ ಚಂದನ್ ಗೋಪಾಲ್, ಕುಡುತಿನಿ ಪಿ ಎಸ್ ಐ ಸುರೇಶ, ಕುರುಗೋಡು ಪಿ ಎಸ್ ಐ ಮೌನೇಶ್ ರಾಥೋಡ್ ಹಾಗೂ ಕುರುಗೋಡು ಪ್ರೊಪೆಸರ್ ಪಿ ಎಸ್ ಐ ಶಾಂತಮೂರ್ತಿ ಹೆಚ್ ಸಿ ಗಳಾದ ಕರಿಬಸಪ್ಪ,ಪರಮೇಶ್ವರ ನಾಯ್ಕ, ಶರಣಪ್ಪ, ಎಪಿಸಿ ರೇವಣ್ಣ,ಮತ್ತು ಕೌಲ್ ಬಜಾರ್ ಠಾಣೆಯ ಹೆಚ್ ಸಿ ನಾಗರಾಜ್, ಅನ್ವರ್ ಅವರನ್ನು ಒಳಗೊಂಡ ತಂಡ ಚುರುಕು ಗೊಳಿಸಿ ಆರೋಪಿಗಳನ್ನು ಪತ್ತೆ ಅಚ್ಚಿ ಜಾಣ್ಮೆಯನ್ನು ಮೆರೆದಿದ್ದಾರೆ.

Share and Enjoy !

Shares