ವಿಜಯನಗರವಾಣಿ ಸುದ್ದಿ: ರಾಯಚೂರು ಜಿಲ್ಲೆ
ಲಿಂಗಸೂಗೂರು ;ಉಪ ಆಯುಕ್ತರು ಅಬಕಾರಿ ಅಧಿಕಾರಿಗಳು ರಾಯಚೂರು ಜಿಲ್ಲೆ ರಾಯಚೂರು ಆದೇಶದ ಮೇರೆಗೆ ಲಿಂಗಸುಗೂರು ತಾಲೂಕಿನ ವಲಯ ವ್ಯಾಪ್ತಿಯಲ್ಲಿ 3 ವರ್ಷಗಳಿಂದ 4 ಲಕ್ಷ 56 ಸಾವಿರ ಮೊತ್ತದ 1145 ಲೀ ಮದ್ಯ, 125. 3 ಲೀ ಬೀಯರ್ 153. 5ಕಳ್ಳ ಭಟ್ಟಿ ಸಾರಾಯಿ, 648 ಬೆಲ್ಲದ ಕೊಳೆ ಹಾಗೂ 10ಕೆಜಿ ಬೆಲ್ಲ ವನ್ನು ವಶಪಡಿಸಿಕೊಂಡಿದ್ದು ಇಂದು ಆ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ರೂಲರ್ ವಾಹನ ಮೂಲಕ ನಾಶ ಪಡಿಸಿದರು,
ಇದೆ ಸಂದರ್ಭದಲ್ಲಿ ರಾಯಚೂರು ಉಪ ವಿಭಾಗ ಅಬಕಾರಿ ಅಧೀಕ್ಷಕರು ಹನುಮಂತ ಗುತ್ತೇದಾರ, ಅಬಕಾರಿ ನಿರೀಕ್ಷಕಿ ಕವಿತಾ, ಲಿಂಗಸುಗೂರು ವಲಯ ಅಬಕಾರಿ ನಿರೀಕ್ಷಕಿ ಸರಸ್ವತಿ, ಉಪ ನಿರೀಕ್ಷಕ ನಿಂಗರಾಜ, ಮಹ್ಮದ್ ಹುಸೇನ, ಹಾಗೂ ಶೈಲಜಾ, ಕೆ, ಎಸ್ ವಿಶಾಲ, ಕಂದಾಯ ಇಲಾಖೆ ಅಧಿಕಾರಿಗಳು, ಅಬಕಾರಿ ಸಿಬ್ಬಂದಿ ಮಂಜುನಾಥ, ಮಾಂಳಿಗರಾಯ, ಅಮರೇಶ, ಮಂಜುನಾಥ, ಚಂದ್ರಕಾಂತ, ರಾಜೇಂದ್ರ, ನಂದಪ್ಪ, ಪರನಾ, ತಿರುಪತಿ, ಆನಂದ ಸೇರಿದಂತೆ ಮುಂತಾದವರು ಇದ್ದರು,