ಸಿದ್ದರಾಮಯ್ಯನವರ ಮೇಲೆ ಮುನಿಸಿಕೊಂಡಿದ್ದಾರ ಮಹದೇವಪ್ಪನವರು.?

Share and Enjoy !

Shares

ವಿಜಯನಗರ ವಾಣಿ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್‌ಸಿ ಮಹದೇವಪ್ಪ ಅವರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ವಿಚಾರ ಪದೇ ಪದೇ ಮುನ್ನಲೆಗೆ ಬರುತ್ತಿದೆ. ಇಬ್ಬರು ನಾಯಕರು ಈ ವಿಚಾರವನ್ನು ಅಲ್ಲಗಳೆಯುತ್ತಿದ್ದರೂ ಸ್ನೇಹದಲ್ಲಿನ ಬಿರುಕು ಮಾತ್ರ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇದನ್ನು ಉದ್ದೇಶಪೂರ್ವಕವಾಗಿ ಮುನ್ನಲೆಗೆ ಬರುತ್ತಿರುವವರು ಯಾರು? ಅಥವಾ ನಿಜಕ್ಕೂ ಇಬ್ಬರು ಸ್ನೇಹಿತರ ನಡುವಿನ ಸ್ನೇಹ ಬಿರುಕು ಬಿಟ್ಟಿದೆಯಾ? ಎಂಬ ಪ್ರಶ್ನೆ ಕಾಡುತ್ತಿದೆ.

ಕಳೆವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಸೋಲಿನ ಬಳಿಕ ಈ ವಿಚಾರ ಸುದ್ದಿಯ ಕೇಂದ್ರಕ್ಕೆ ಬಂದಿದೆ. ಮೈಸೂರಿನಲ್ಲಿ ರಾಜಕೀಯಗೂ ಹಾಗೂ ವೈಯಕ್ತಿಕವಾಗಿಯೂ ಸ್ನೇಹಿತರಾಗಿದ್ದ ಸಿದ್ದರಾಮಯ್ಯ ಹಾಗೂ ಎಚ್‌ಸಿ ಮಹದೇವಪ್ಪ ಬಹುತೇಕ ಒಂದು ನಿಲುವು ಹಾಗೂ ಸಿದ್ದಾಂತ ಹೊಂದಿದ್ದಾರೆ. ಅವರಿಬ್ಬರ ಪುತ್ರರೂ ಸ್ನೇಹಿತರಾಗಿದ್ದರು. ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಹಾಗೂ ಎಚ್‌ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಕೂಡಾ ಆಪ್ತ ಮಿತ್ರರಾಗಿದ್ದವರು.

ಆದರೆ ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಚರ್ಚೆಗಳು ಶುರುವಾದರು. ಇದಕ್ಕೆ ಪೂರಕ ಎಂಬಂತೆ ಇಬ್ಬರು ರಾಜಕೀಯ ಹಾಗೂ ವೈಯಕ್ತಿಕ ನೆಲೆಯಲ್ಲಿ ಅಂತರ ಕಾಯ್ದುಕೊಂಡಿದ್ದರು. ಆದರೆ ಬಹಿರಂಗವಾಗಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿರಲಿಲ್ಲ. ಇಬ್ಬರ ಸ್ನೇಹದ ಕುರಿತಾಗಿ ಗುಸು ಗುಸು ಚರ್ಚೆಗಳು ಶುರುವಾದರೂ ಈ ಕುರಿತಾದ ವದಂತಿಗಳನ್ನು ಇಬ್ಬರು ನಿರಾಕರಣೆ ಮಾಡಿದ್ದರು.

ಈ ನಡುವೆ ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಅಷ್ಟೊಂದು ಸಕ್ರಿಯವಾಗಿಲ್ಲದ ಎಚ್‌ಸಿ ಮಹದೇವಪ್ಪ ಆರೋಗ್ಯದ ಕಾರಣವನ್ನು ನೀಡಿದ್ದರು. ಅದರ ಹೊರತಾಗಿ ಸಿದ್ದರಾಮಯ್ಯ ಜೊತೆಗಿನ ಮುನಿಸು ಕಾರಣ ಎಂಬುವುದು ಸುಳ್ಳು ಎಂದು ಸಮಜಾಯಿಷಿ ನೀಡಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಎಚ್‌ಸಿ ಮಹದೇವಪ್ಪ ಅವರ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ ನಮ್ಮ ನಡುವೆ ಯಾವುದೇ ಮುನಿಸು ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಆದರೆ ಇದೀಗ ಮತ್ತೊಮ್ಮೆ ಈ ವಿಚಾರ ಸದ್ದು ಮಾಡುತ್ತಿದೆ. ಆದರೆ ಇದಕ್ಕೆ ಸ್ವತಃ ಎಚ್‌ಸಿ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ. ನಾನಾಗಲೀ ಸಿದ್ದರಾಮಯ್ಯನವರಾಗಲೀ ಅಷ್ಟಾಗಿ ಸ್ಥಳೀಯ ಮಟ್ಟದ ಚುನಾವಣೆಗಳ ಬಗ್ಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.ಇನ್ನೇನೂ ಚುನಾವಣಾ ಪ್ರಕ್ರಿಯೆಗಳು ಗರಿಗೆದರುವ ಹೊತ್ತಿನಲ್ಲೇ ಸಿದ್ದರಾಮಯ್ಯ ಮತ್ತು ಮಹದೇವಪ್ಪನವರ ನಡುವೆ ಈ ಹಿಂದೆ ಮಾಡಿದಂತೆಯೇ ಬಿರುಕು ಮೂಡಿಸಬೇಕೆಂಬ ನಿಮ್ಮ ಪ್ರಯತ್ನಗಳು ಮತ್ತು ತಲೆಯೇ ಇಲ್ಲದ ಆರೋಪಗಳಿಗೆ ಇರಬಹುದಾದ ಕಾರಣಗಳನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ.
ಇನ್ನೂ ಮುಖ್ಯವಾಗಿ ಹೇಳುವುದಾದರೆ, ಯಾವುದು ಶಕ್ತಿಯುತವಾಗಿರುತ್ತದೋ, ಅಂತಹದ್ದರ ಬಗ್ಗೆಯೇ ಕೆಲವರಿಗೆ ಅಳುಕು, ಇದ್ದು ಅದು ಈ ರೀತಿಯಲ್ಲಿ ವ್ಯಕ್ತವಾಗುತ್ತದೆ ಎಂದು ನನಗೆ ಅನ್ನಿಸುತ್ತದೆ. ಆದರೆ ಈ ಬಾರಿ ನಿಮ್ಮಗಳ ಕುತಂತ್ರಗಳು ಫಲಿಸುವುದಿಲ್ಲ ಎಂಬುದನ್ನು ನಿಮಗೆ ತಿಳಿಸಲು ಬಯಸುತ್ತೇನೆ.

ಸಿದ್ದರಾಮಯ್ಯ- ಮಹದೇವಪ್ಪನವರ ಸ್ನೇಹದಲ್ಲಿ ಬಿರುಕು ಮೂಡುವುದು ನಿಮಗೆ ಬಹಳ ಇಷ್ಟವಿರಬಹುದು. ಆದರೆ ಅದು ನಮಗೆ ಇಷ್ಟವಿಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಳ್ಳದೇ ಹೋದರೆ ನಮ್ಮಿಬ್ಬರಿಗೆ ಅದರಿಂದ ಯಾವುದೇ ನಷ್ಟವಿಲ್ಲ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

Share and Enjoy !

Shares