ವಿಧವಾ ವೇತನ ಹಾಗೂ ಸಂಧ್ಯಾ ಸುರಕ್ಷಾ ಮಂಜೂರಾತಿ ಪ್ರಮಾಣ ಪತ್ರ ವಿತರಣೆ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ: ರಾಯಚೂರು ಜಿಲ್ಲೆ

 

ಲಿಂಗಸುಗೂರು ; ತಾಲೂಕಿನ  ಕಾಳಾಪೂರು ಗ್ರಾಮದ  ಅನುಸಮ್ಮ ಗಂ ಆದಪ್ಪ  ಇವರಿಗೆ ಸರ್ಕಾರದ ತಹಶಿಲ್ದಾರ ಕಾರ್ಯಾಲಯದಿಂದ ಶವ ಸಂಸ್ಕಾರ 5000 ರೂ . ಹಾಗೂ ಸಾಮಾಜಿಕ ಭದ್ರತಾ ಯೋಜನೆ 20000 ರೂ . ಹಾಗೂ ತಿಂಗಳ ಮಾಸಿಕ ವಿಧವಾ ವೇತನ 800 ರೂ.ಗಳು ಹಾಗೂ ರಾಜಮ್ಮ ಗಂ / ನಿಂಗಪ್ಪ ಇವರಿಗೆ ಸಂಧ್ಯಾ ಸುರಕ್ಷಾ ಯೋಜನೆಯ 1200 ರೂ.ಗಳ ಮಂಜೂರಾತಿ ಆದೇಶ ಪ್ರತಿಯನ್ನು  ಅಮರೇಶ ಆರ್.ನಾಡಗೌಡ್ರು  ಹಾಗೂ  ಕಾಳಾಪೂರು ಗ್ರಾಮ ಪಂಚಾಯತ   ಅಧ್ಯಕ್ಷ ವಿಜಯಕುಮಾರ ಹೊಸಗೌಡ್ರು  ಫಲಾನುಭವಿಗಳಿಗೆ ಮಂಜೂರಾದ ಆದೇಶ ಪ್ರತಿಯನ್ನು ವಿತರಿಸಿದರು .

ಕಾಳಾಪೂರು ಗ್ರಾಮದ  ದೇವಪ್ಪ ಭೀರಪ್ಪ ರವರು ಊರಿನ ಹಲವು ಬಡಜನ ಫಲಾನುಭವಿಗಳಿಗೆ ಸರ್ಕಾರದ ಇಲಾಖೆಯ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿರುತ್ತಾರೆ.

ಈ ಸಂದರ್ಭದಲ್ಲಿ ವಿರುಪಾಕ್ಷಯ್ಯ ಹೊಸಮಠ ಕಾಳಾಪೂರು , ಪ್ರಭುರಾಜ , ಶರಣಪ್ಪ ಪೂಜಾರಿ , ನಾರಾಯಣ , ಹನುಮಂತ ಗುಳಗಿ , ಮಲ್ಲಪ್ಪ ಭೋವಿ , ಕಾಳಾಪೂರು ಗ್ರಾಮದ ಯುವಕರು ಹಾಜರಿದ್ದರು ,

 

Share and Enjoy !

Shares