ಲಿಂಗಸುಗೂರು :ಅಕ್ರಮ ಕಳ್ಳಬಟ್ಟಿ ಮೇಲೆ ಅಬಕಾರಿ ದಾಳಿ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ

 

ಲಿಂಗಸುಗೂರು : ಶನಿವಾರ ಕಚೇರಿಯ ಸಿಬ್ಬಂದಿ ಅವರೊಂದಿಗೆ ಲಿಂಗಸೂಗೂರು ವಲಯ ವ್ಯಾಪ್ತಿಯ ಮುದುಗಲ್ ಹೋಬಳಿಯ ಬಯ್ಯಾಪೂರ ತಾಂಡದಲ್ಲಿ  ಜಿಲ್ಲಾ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರೊಂದಿಗೆ ಅಬಕಾರಿ ದಾಳಿಯನ್ನು ಮಾಡಲಾಗಿದ್ದು ಸದರಿ ದಾಳಿಯ ಸಮಯದಲ್ಲಿ ರುಕ್ಮವ್ವ ಎಂಬಾಕೆಯ ಮನೆಯಲ್ಲಿ  ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 08 ಲೀ. ಕಳ್ಳಭಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದು ಸದರಿ ಆರೋಪಿತಳ ವಿರುದ್ಧ  ಬಸಲಿಂಗಪ್ಪ ಅಬಕಾರಿ ಉಪ ನಿರೀಕ್ಷಕರು ರಾಯಚೂರು ರವರು  ಘೋರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

ದಾಳಿಯ ಸಮಯದಲ್ಲಿ  ಸರಸ್ವತಿ ಅಬಕಾರಿ ನಿರೀಕ್ಷಕರು ಲಿಂಗಸೂಗೂರು  ಶೈಲಜಾ ಅಬಕಾರಿ ನಿರೀಕ್ಷಕರು ಡಿ ಸಿ ಸಿ ಬಿ ರಾಯಚೂರು ಸಿದ್ಧಾರೂಢ ಅಬಕಾರಿ ನಿರೀಕ್ಷಕರು  ಸಿಂಧನೂರು ವಲಯ, ಬಸಲಿಂಗಪ್ಪ ಅಬಕಾರಿ ಉಪ ನಿರೀಕ್ಷಕರು  ಉಪ ವಿಭಾಗ ರಾಯಚೂರು,  ಲಿಂಗರಾಜು ಅಬಕಾರಿ ಉಪ ನಿರೀಕ್ಷಕರು,  ಯಮನೂರು ಅಬಕಾರಿ ಉಪ ನಿರೀಕ್ಷಕರು ಹಾಗೂ ಅಬಕಾರಿ ಪೇದೆಗಳಾದ ಮಾಳಿಂಗರಾಯ. ಮಂಜುನಾಥ ರಾಜೇಂದ್ರ ಚಂದ್ರಕಾಂತ್ ಆನಂದ್ ಶಿವನಂದ ತಿರುಪತಿ ದೇವರಾಜ್ ನಾಗರಾಜ್ ವಾಹನ ಚಾಲಕರಾದ ಅಮರೇಶ್ ಮತ್ತು ಮಂಜುನಾಥ  ವೆಂಕಟೇಶ ಹಫೀಸ್ ಮತ್ತು ಮುದಗಲ್ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Share and Enjoy !

Shares