ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು:ತಾಲೂಕಿನ ಪೂಲಬಾವಿ ಗ್ರಾಮದ ಹೊರವಲಯದ ಬಾವಿಯಲ್ಲಿ ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸೇರಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೂಲಬಾವಿ ಗ್ರಾಮದ ಬಾವಿಯಲ್ಲಿ ಮೊಸಳೆ ನೋಡಿದ ಗ್ರಾಮಸ್ಥರು ಆತಂಕಗೊಂಡು ಭಯಭೀತರಾಗಿದ್ದರು ಗ್ರಾಮಸ್ಥರು ಲಿಂಗಸುಗೂರು ಆರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಕೂಡಲೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೂಲಬಾವಿ ಗ್ರಾಮದ ಜನರು ಸೇರಿ ಮಸುಳೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೇರೆ ಸ್ಥಳಕ್ಕೆ ಬಿಡಲು ಕೊಂಡೊಯ್ದುದಿದ್ದಾರೆ.