ವಿಜಯನಗರವಾಣಿ ಸುದ್ದಿ
ಸಿರುಗುಪ್ಪ :ತಾಲೂಕಿನ ರಾರಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆ ಹಿನ್ನಲೆಯಲ್ಲಿ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ತೆರವು ಆದ ಕಾರಣ ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕೆ.ಸತೀಶ್ ನಾಮಪತ್ರ ಸಲ್ಲಿಸಿದ್ದು ಅವರ ವಿರುದ್ದವಾಗಿ ಯಾರು ನಾಮಪತ್ರ ಸಲ್ಲಿಸದೆ ಇರುವುದರಿಂದ
ಚುನಾವಣೆ ಅಧಿಕಾರಿಗಳು ಕೆ. ಸತೀಶ್ ವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಎ ಘೋಷಣೆ ಮಾಡಿದ್ದಾರೆ.
ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡಿದರೂ. ಇದೇ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಆರ್. ಸಿ ಪಂಪನಗೌಡ, ಶಾಸಕ ಪುತ್ರ ಎಮ್ ಎಸ್ ವೆಂಕಟಪ್ಪ ನಾಯಕ, ಮುಖಂಡರಾದ ಕೆ. ನಾಗೇಶಪ್ಪ, ಚಂದ್ರಶೇಖರ್, ಸೋಮಯ್ಯ, ಪಾಲಕ್ಷಿಗೌಡ, ದೊಡ್ಡನಗೌಡ, ಮಲ್ಲಯ್ಯ, ಹಗರೇಪ್ಪ, ಮಂಜುನಾಥ, ಜಿ. ಯಲ್ಲಪ್ಪ, ಮಹಾದೇವ ಇನ್ನು ಮುಂತಾದವರು ಇದ್ದರು.