ಬಳ್ಳಾರಿ :ಬಳ್ಳಾರಿ ನಗರದ 19ನೇ ವಾರ್ಡಿನ ಕೆ.ಅನಿಲ್ ಕುಮಾರ್, ಕೆ.ತಾರಾಕೇಶ್,ಶಾಶಾವಲ್ಲಿ, ರಫೀಕ್, ಮುಸ್ತಪಾ ಅಬೀಬ್, ವಿಕ್ಕಿ ಜೊತೆಗೆ ಅನೇಕ ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು, ಮೆಹಫೂಜ್ ಅಲಿಖಾನ್ ಇವರ ನೇತೃತ್ವದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹಿರಿಯ ಮುಖಂಡರಾದ ಶ್ರೀನಿವಾಸರೆಡ್ಡಿ, ಮೆಹಫೂಜ್ ಅಲಿಖಾನ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.