ಬೆಂಗಳೂರು ವಿವಿ: ಸಂಶೋಧನಾ ವಿದ್ಯಾರ್ಥಿ ಈಶ್ವರ್ ಮತ್ತು ಶಶಿಕುಮಾರ್ ಗೆ: ಅತ್ಯುತ್ತಮ ಸಂಶೋಧನಾ ಲೇಖನದ ‘ಗೌರವ ಪ್ರಶಸ್ತಿ’ ಪ್ರದಾನ

Share and Enjoy !

Shares
Listen to this article

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ವತಿಯಿಂದ  ಜಂಟಿ ಸಹಯೋಗದೊಂದಿಗೆ ಆಯೋಜಿಸಿದ “ಭಾರತದ ಸಮಕಾಲೀನ ಸವಾಲುಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು”  ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.

ಇದರ ಕಾರ್ಯಕ್ರಮದ ಅಂಗವಾಗಿ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ (Research Scholar)

ಅತ್ಯುತ್ತಮ ಸಂಶೋಧನಾ ಲೇಖನ : 2021-2022 ಸಾಲಿನ ಪುರಸ್ಕೃತ ಬಹುಮಾನಕ್ಕೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರು ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಕೆ. ರವಿ ರವರ ಮಾರ್ಗದರ್ಶನದಲ್ಲಿ ಪೂರ್ಣಾವಧಿ ಸಂಶೋಧನೆಯನ್ನು ಅಧ್ಯಯನ ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿ ಈಶ್ವರ್ ಮತ್ತು ಶಶಿಕುಮಾರ್ ರವರಿಗೆ ವಿಶ್ವವಿದ್ಯಾಲಯದ ಆಡಳಿತ ವರ್ಗದ ಕುಲಸಚಿವರ ಡಾ. ಶ್ರೀನಿವಾಸ್, ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ ಕಾಂತರಾಜ್, ಕೇಂದ್ರದ ನಿರ್ದೇಶಕ ಡಾ. ಹೊನ್ನು ಸಿದ್ದಾರ್ಥ ಸಿ.ಬಿ, ವಿತ್ತಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ, ಡಾ. ಪಿ.ಸಿ. ನಾಗೇಶ್, ಡಾ. ನಾಗರತ್ಮಮ್ಮ, ಡಾ‌. ಮುರಳೀಧರ್ ಬಿ.ಎಲ್, ಮತ್ತಿತರರು ಸಮ್ಮುಖದಲ್ಲಿ 10.000 ರೂ.ಗಳ ನಗದು ಬಹುಮಾನ, ಸ್ಮರಿಣಿಕೆ ನೀಡಿ ಗೌರವಿಸಲಾಯಿತು.

 

Share and Enjoy !

Shares