ಬಳ್ಳಾರಿ :ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರು ಮತಯಾಚನೆ ಕಾರ್ಯಕ್ರಮವನ್ನು ಬಳ್ಳಾರಿ ನಗರದ 13ನೇ ವಾರ್ಡಿನ ಪ್ರಜೆಗಳಲ್ಲಿ ಕಾಲ್ನಡಿಗೆಯ ಮೂಲಕ ಪ್ರಚಾರವನ್ನು ಹಮ್ಮಿಕೊಂಡರು.
ಈ ಸಮಯದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಸ್.ಆಂಜನೇಯಲು 13 ನೇ ವಾರ್ಡಿನ ಮುಖಂಡರು ಗಾಜುಲ ಸೀನ, ಶಿವು, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ್, ಕಾರ್ಪೊರೇಟರ್ ನಂದೀಶ್, ರಾಮಾಂಜನೇಯಲು, ವಿಕ್ಕಿ, ಜಬ್ಬಾರ್, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶೋಭಾ ಕಾಲಿಂಗ, ಬ್ರೂಸ್ಪೇಟ್ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸ್, ಕಾಂಗ್ರೇಸ್ ಮುಖಂಡರು ಶ್ರೀರಾಮ್ ರಾಜು, ಆನಂದ್, ಕಿಶೋರ್ ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.