ಬಳ್ಳಾರಿ:ಅಧಿಕ ಕರೆಂಟ್ ಬಿಲ್ ದರ ಹಿನ್ನೆಲೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ವ್ಯಾಪಾರಿಗಳು ಮಾರುಕಟ್ಟೆ ಬಂದ್ ಮಾಡಿದ್ದಾರೆ. ಒಂದು ಕಡೆ ಉಚಿತ ವಿದ್ಯುತ್ ಮತ್ತೊಂದು ಕಡೆ ಕರಂಟ್ ಬಿಲ್ ಹೆಚ್ಚಳದಿಂದ ರಾಜ್ಯದ ಜನರು ಮತ್ತು ವ್ಯಾಪಾರಿಗಳು ತತ್ತರಿಸಿದ್ದಾರೆ.ಬಳ್ಳಾರಿಯ ಕಾಳಮ್ಮ ಬೀದಿಯಲ್ಲಿ ವ್ಯಾಪಾರಿಗಳು ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ.ಅಂಗಡಿ ಮುಂಗಟ್ಟು ಬಂದ್ ಮಾಡಿ ವ್ಯಾಪಾರಿಗಳು ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು ಅಂಗಡಿ ಮುಂಗಟ್ಟುಗಳು ಬಂದ್ ಆದ ಹಿನ್ನೆಲೆ ಕಾಳಮ್ಮ ಬೀದಿ ಬಿಕೋ ಎನ್ನುತ್ತಿದೆ.ಅಧಿಕ ಕರೆಂಟ್ ಬಿಲ್ ದರ ಹಿನ್ನೆಲೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ವ್ಯಾಪಾರಿಗಳು ಮಾರುಕಟ್ಟೆ ಬಂದ್.ಬೇಕಾಬಿಟ್ಟಿ ಬೆಲೆ ಏರಿಕೆ ಖಂಡಿಸಿ ಅಘೋಷಿತ ಬಂದ್ಗೆ ಕರೆ ನೀಡಿದ್ದಾರೆ. ಪ್ರತಿದಿನ ಜನ ಜಂಗಳಿಯಿಂದ ಕೂಡಿರುತ್ತಿದ್ದ ಬೀದಿ ಈಗ ಖಾಲಿ ಖಾಲಿಯಾಗಿದೆ.