ಅಂತರಾಷ್ಟ್ರೀಯ ಆಟದ ದಿನ

Vijayanagara Vani
ಅಂತರಾಷ್ಟ್ರೀಯ ಆಟದ ದಿನ

ಕೊಟ್ಟೂರು: ಸ್ಥಳೀಯ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಕ್ರೀಡಾ ವಿಭಾಗದಿಂದ  ಅಂತರಾಷ್ಟ್ರೀಯ ಆಟದ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ. ರವಿಕುಮಾರ್ ಇವರು ಕ್ರೀಡೆಯು ಮಾನವನಿಗೆ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ತಂದು ಕೊಡುತದೆ,ಹಾಗೂ ಸದೃಢ ದೇಹಕೆ ಕ್ರೀಡಾ ಚಟುವಟಿಕೆಗಳು ಅತಿ ಅವಶ್ಯಕವಾಗಿರುತದೆ ಎಂದು ಹೇಳಿದರು, ವಿದ್ಯಾರ್ಥಿಗಳಿಂದ ಟೇಬಲ್ ಟೆನ್ನಿಸ್ , ಖೋ- ಖೋ ಹಾಗೂ ಕಬ್ಬಡ್ಡಿ ಕ್ರೀಡೆಗಳನ್ನು ಆಡಿಸಲಾಯಿತು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶಿವಕುಮಾರ್ ಮತ್ತು ಬಸವರಾಜ್ ಬಣಕಾರ್ ಇವರು ಕಾರ್ಯಕ್ರಮವನ್ನು ಆಯೋಜಿಸಿದರು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್. ಎಂ. ಎಚ್. , ಪ್ರೊಫೆಸರ್ ರವೀಂದ್ರ ಗೌಡ, ಡಾ. ಚೇತನ್ ಚೌಹಾನ್, ಉಪನ್ಯಾಸಕರಾದ ಸುದರ್ಶನ್. ಬಿ . ಮತ್ತು ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

WhatsApp Group Join Now
Telegram Group Join Now
Share This Article
error: Content is protected !!