ಕಲ್ಮಲಾ ಶ್ರೀ ಕರಿಯಪ್ಪ ತಾತಾ ಜಾತ್ರೆ; ಮದ್ಯ ಮಾರಾಟ ನಿಷೇಧ ಜಿಲ್ಲಾಧಿಕಾರಿ ನಿತೀಶ್ ಕೆ.

Vijayanagara Vani
ಕಲ್ಮಲಾ ಶ್ರೀ ಕರಿಯಪ್ಪ ತಾತಾ ಜಾತ್ರೆ; ಮದ್ಯ ಮಾರಾಟ ನಿಷೇಧ ಜಿಲ್ಲಾಧಿಕಾರಿ ನಿತೀಶ್ ಕೆ.
ರಾಯಚೂರು, ತಾಲೂಕಿನ ಕಲ್ಮಲಾ ಗ್ರಾಮದ ಶ್ರೀ ಕರಿಯಪ್ಪ ತಾತಾ ದೇವಸ್ಥಾನದ ಜಾತ್ರೆ ಸುಗಮವಾಗಿ ನಡೆಯಲು ಆಯ್ದ ದಿನಗಳಂದು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಅವರು ತಿಳಿಸಿದ್ದಾರೆ.
ಅಬಕಾರಿ ಕಾಯ್ದೆ 1965ರ ಕಲಂ.21 (1)ರನ್ವಯ ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದ ಶ್ರೀ ಕರಿಯಪ್ಪ ತಾತಾ ಜಾತ್ರೆಯಲ್ಲಿ ಭಕ್ತಾದಿಗಳಿಗೆ ತೊಂದರೆಯಾಗದ0ತೆ ಹಾಗೂ ಕಾನೂನು, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮತ್ತು ಜಾತ್ರೆಯು ಸುಗಮವಾಗಿ ನಡೆಯಲು ಮುಂಜಾಗ್ರತಾ ಕ್ರಮವಾಗಿ ದಿನಾಂಕ:09-08-2024ರ0ದು ಸಂಜೆ 05ಗಂಟೆಯಿ0ದ ದಿನಾಂಕ:10-08-2024 ರಂದು ಬೆಳಿಗ್ಗೆ 6ಗಂಟೆಯವರೆಗೆ, ದಿನಾಂಕ:12-08-2024 ರಂದು ಬೆಳಿಗ್ಗೆ 6ಗಂಟೆಯಿ0ದ ಮರು ದಿನ ಬೆಳಿಗ್ಗೆ 6ಗಂಟೆಯವರೆಗೆ, ದಿನಾಂಕ:19-08-2024 ರಂದು ಬೆಳಿಗ್ಗೆ 6ಗಂಟೆಯಿoದ ಮರು ದಿನ ಬೆಳಿಗ್ಗೆ 6-00 ಗಂಟೆಯವರೆಗೆ ಹಾಗೂ ದಿನಾಂಕ:26-08-2024 ರಂದು ಬೆಳಿಗ್ಗೆ 6ಗಂಟೆಯಿoದ ಮರು ದಿನ ಬೆಳಿಗ್ಗೆ, 6ಗಂಟೆಯವರೆಗೆ ಕಲ್ಮಲಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ಮಧ್ಯ ತಯಾರಿಕಾ ಘಟಕಗಳು, ಸಾಗಾಣಿಕೆ ಮತ್ತು ಸಂಗ್ರಹಣೆಯನ್ನು/ ಮಾರಾಟ ಮಳಿಗೆಗಳನ್ನು ಬಂದ್ ಇಡಲು ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಹೊರಗಿನಿಂದ ಮದ್ಯ ಇತ್ಯಾದಿಗಳನ್ನು ತಂದು ಮಾರಾಟ ಮಾಡುವುದು ಕಂಡುಬ0ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!