ಪರೀಕ್ಷೆ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಭೇಟಿ, ಪರಿಶೀಲನೆ

Vijayanagara Vani
ಪರೀಕ್ಷೆ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಭೇಟಿ, ಪರಿಶೀಲನೆ

ರಾಯಚೂರು,ಜೂ.20- ನಗರದ ಸೇಂಟ್ ಮೇರಿ ಕಾನ್ವೆಂಟ್ ಎಸ್ಸೆಸ್ಸೆಲ್ಸಿ ಪರೀಕ್ಷೆ-2ರ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ಡಾ.ದುರುಗೇಶ್ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ-2ರ ವಿಜ್ಞಾನ ವಿಷಯದ ಪರೀಕ್ಷೆಗೆ ಒಟ್ಟು 9188 ವಿದ್ಯಾರ್ಥಿಗಳು ಹಾಜರಾಗಿದ್ದರು. 1388 ವಿದ್ಯಾರ್ಥಿಗಳು ಗೈರಾಗಿದ್ದರು. ದೇವದುರ್ಗ ತಾಲೂಕಿನಲ್ಲಿ 732, ಪರೀಕ್ಷೆ ಬರೆದಿದ್ದು, 145 ವಿದ್ಯಾರ್ಥಿಗಳು ಗೈರು, ಲಿಂಗಸೂಗೂರು ತಾಲೂಕಿನಲ್ಲಿ 2142, ಪರೀಕ್ಷೆ ಬರೆದಿದ್ದು, 306 ವಿದ್ಯಾರ್ಥಿಗಳು ಗೈರು, ಮಾನವಿ ತಾಲೂಕಿನಲ್ಲಿ 1813 ಪರೀಕ್ಷೆ ಬರೆದಿದ್ದು, 324 ವಿದ್ಯಾರ್ಥಿಗಳು ಗೈರು, ರಾಯಚೂರು ತಾಲೂಕಿನಲ್ಲಿ 3483, ಪರೀಕ್ಷೆ ಬರೆದಿದ್ದು, 463 ವಿದ್ಯಾರ್ಥಿಗಳು ಗೈರು, ಸಿಂಧನೂರು ತಾಲೂಕಿನಲ್ಲಿ 1018 ಪರೀಕ್ಷೆ ಬರೆದಿದ್ದು, 150 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!