Ad image

ರಾಜೀವ್ ಗಾಂಧಿವಸತಿ ನಿಗಮದ ಪ್ರಯೋಜನವನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸಿ.ಎ ಜಿ ಎಂ ಆಶಾ

Vijayanagara Vani
ರಾಜೀವ್ ಗಾಂಧಿವಸತಿ ನಿಗಮದ ಪ್ರಯೋಜನವನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸಿ.ಎ ಜಿ ಎಂ ಆಶಾ

ಗಂಗಾವತಿ: ನಗರದ ಮಂಥನ ಸಭಾಂಗಣದಲ್ಲಿ ದಿನಾಂಕ 25-9-2024.ರಂದು ನಡೆದ ರಾಜೀವ್ ಗಾಂಧಿ ವಸತಿ ನಿಗಮ ದಿಂದ ದೊರೆಯುವ ಸೌಲಭ್ಯ ಗಳಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿ ಎ.ಜಿ.ಎಂ ಆಶಾ ಬೆಂಗಳೂರು ರವರು ಮತ್ತು ತಾಲೂಕ ಪಂಚಾಯಿತಿ ಕಾರ್ಯ ನಿರ್ವಹಕ ಅಧಿಕಾರಿ ಲಕ್ಸ್ಮಿದೇವಿ. ನೇತೃತ್ವದಲ್ಲಿ ಗಂಗಾವತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿ ಪಂಚಾಯತ್ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ದಿಂದ ದೊರೆಯುವ ಸೌಲಭ್ಯ ವನ್ನು ಪಲಾನುಭವಿಗಳಿಗೆ ತಲುಪಿಸಬೇಕು. ಜೊತೆಗೆ ಮನೆ ಇಲ್ಲದ ಪಲಾನುಭವಿಗಳ ವಿವರಗಳನ್ನು ಸಂಪೂರ್ಣವಾಗಿ ಪಡೆದು ಮನೆಗಳನ್ನು ನೀಡುವುದು. ಮತ್ತು ಸರ್ವೇ ಮಾಡುವಾಗ ಪಕ್ಕಾ ಮನೆ ಅಥವಾ ಕಚ್ಚಾ ಮನೆ ಮೊದಲು ಕಾತರಿ ಮಡಿಕೊಳ್ಳಿ ಎಂದು ಹೇಳಿದರು.ಈಗಾಗಲೇ ಬಿಡುಗಡೆ ಯಾಗಿರುವ ಮನೆಗಳಲ್ಲಿ ಕಂತಿನ ಹಣ ಕೆಲವು ಪಲಾನುಭವಿಗಳಿಗೆ ಬಂದಿರುವುದಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ವಿವರಿಸಿದರು.ತಾ ಪ ಅಧಿಕಾರಿ ಮಾತನಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲರು ಸರಿಯಾದ ರೀತಿಯಲ್ಲಿ ನಿಗವಹಿಸಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಗಂಗಾವತಿ ತಾಲೂಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿದರು.

Share This Article
error: Content is protected !!
";