ಬ್ರಹ್ಮಾಕುಮಾರಿ ವೀಣಾ ಅಕ್ಕನವರು ಪ್ರಸಿದ್ಧ ಮನ ಪ್ರೇರಕ ಪ್ರವಚನಕಾರರಿಂದ ಪ್ರವಚನ ಕಾರ್ಯಕ್ರಮ.

Vijayanagara Vani
ಬ್ರಹ್ಮಾಕುಮಾರಿ ವೀಣಾ ಅಕ್ಕನವರು ಪ್ರಸಿದ್ಧ ಮನ ಪ್ರೇರಕ ಪ್ರವಚನಕಾರರಿಂದ ಪ್ರವಚನ ಕಾರ್ಯಕ್ರಮ.

ಸಿರುಗುಪ್ಪ : ನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ, ದಿನಾಂಕ :17 ಜುಲೈ ರಿಂದ 19ರವರಿಗೆ ( ಸಂಜೆ 6ಗಂಟೆಗೆ) ಬ್ರಹ್ಮಾಕುಮಾರಿ ವೀಣಾ ಅಕ್ಕನವರು ಪ್ರಸಿದ್ಧ ಮನ ಪ್ರೇರಕ ಪ್ರವಚನಕಾರರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು
ಸಿರುಗುಪ್ಪ ಓಂ ಶಾಂತಿ ಕೇಂದ್ರ ಮುಖ್ಯಸ್ಥೆ ಪೂರ್ಣಿಮ ಅಕ್ಕನವರು ತಿಳಿಸಿದ್ದಾರೆ‌.
ನಗರದ ಓಂ ಶಾಂತಿ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವಚ್ಛ ಹಾಗೂ ಸ್ವಸ್ಥ ಸಮಾಜ ನಿರ್ಮಾಣ ಇಂದು ಅಗತ್ಯವಾಗಿದೆ. ಆದರೆ ಕೇವಲ ಬಾಹ್ಯ ಸ್ವಚ್ಛತೆ ಹಾಗೂ ದೈಹಿಕ ಆರೋಗ್ಯದಿಂದ ಇದು ಸಾಧ್ಯವಿಲ್ಲ. ಮಾನಸಿಕವಾಗಿ ಒತ್ತಡ ಮುಕ್ತನಾಗಿ ಈರ್ಷೆ, ದ್ವೇಷಗಳಿಂದ, ತಿರಸ್ಕಾರಗಳಿಂದ ಮುಕ್ತನಾಗಿ ಬದುಕುವುದು ಅವಶ್ಯಕ. ಇಂದಿನ 80% ರೋಗಗಳಿಗೆ ಕಾರಣ ಮಾನಸಿಕ ಒತ್ತಡ ಖಿನ್ನತೆ, ಚಟಗಳು ಆದುದರಿಂದ ಆಧ್ಯಾತ್ಮಿಕವಾಗಿ ಶಕ್ತಿಶಾಲಿಗಳು ಆದಾಗ ಆರೋಗ್ಯವಂತ ಸ್ವಚ್ಛ ಸಮಾಜ ನಿರ್ಮಾಣವಾಗುವುದು.

ಈ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಹಮ್ಮಿಕೊಂಡಿದ್ದೇವೆ. ಸ್ವಚ್ಛ ಮತ್ತು ಸ್ವಸ್ಥ ಸಮಾಜ ಆಧ್ಯಾತ್ಮಿಕ ಶಕ್ತಿಯಿಂದ ಎನ್ನುವುದರ ವಿಷಯ ಕುರಿತು ಉಪನ್ಯಾಸವನ್ನು ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾ ಅಕ್ಕನವರು ತಿಳಿಸಲಿದ್ದಾರೆ. ರಾಷ್ಟ್ರೀಯ ಮಟ್ಟದ ಉತ್ತಮ ವಾಗ್ನಿಗಳು, ಅನೇಕರಿಗೆ ಪ್ರೇರಣದಾಯಿ ನುಡಿಗಳನ್ನು ತಿಳಿಸಿ ಉತ್ತಮ ಜೀವನ ರೂಪಿಸುವಲ್ಲಿ ಮಾದರಿ ವ್ಯಕ್ತಿಯಾಗಿದ್ದಾರೆ. ಹಾಗೂ 45 ವರ್ಷಗಳಿಂದ ಈಶ್ವರನ ಸೇವೆಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಕರ್ನಾಟಕ ಮತ್ತು ಅಂತರರಾಜ್ಯಗಳಲ್ಲಿ ಈಶ್ವರನ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಇಂತಹ ರಾಜಯೋಗಿನಿ. ತಪಸ್ವಿನಿ ನಮ್ಮ ನಗರಕ್ಕೆ ಆಗಮಿಸುತ್ತಿದ್ದಾರೆ. ಅವರ ಅಮೃತ ಪ್ರವಚನವನ್ನು, ಸ್ಪೂರ್ತಿದಾಯಕ ಅಮೃತ ನುಡಿಗಳನ್ನು ಆಲಿಸಲು ತಾವೇಲ್ಲರು ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ

WhatsApp Group Join Now
Telegram Group Join Now
Share This Article
error: Content is protected !!