ಧಾರವಾಡ ಏ.24: ಧಾರವಾಡ ಕುಮಾರೇಶ್ವರ ನಗರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧಿ ಭವನಕ್ಕೆ ಇಂದು ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿರುವ ಮಕ್ಕಳ ಬೇಸಿಗೆ ಶಿಬಿರದ ಶಿಬಿರಾರ್ಥಿಗಳು ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.
ಗಾಂಧಿ ಭವನ ಒಳಾಂಗಣ ಗೋಡೆಗಳ ಮೇಲೆ ತೆಗೆದಿರುವ ಗಾಂಧೀಜಿ ಅವರ ಜೀವನ ಆಧಾರಿತ ವಿವಿಧ ಚಿತ್ರಗಳನ್ನು, ಛಾಯಚಿತ್ರಗಳನ್ನು ಮಕ್ಕಳು ವಿಕ್ಷೀಸಿ, ವಿಷಯ ತಿಳಿದುಕೊಂಡರು.
ಗಾಂಧಿ ಭವನದಲ್ಲಿ ಗಾಂಧಿ ಪ್ರತಿಮೆಗೆ ನಮಿಸಿ, ಭಾಷಣ, ಗಾಂಧಿ ಭಂಗಿ, ಹಾಡು ಹೇಳಿ ಮಕ್ಕಳು ಖುಷಿ ಪಟ್ಟರು. ಗಾಂಧಿ ಭವನ ಪಕ್ಕದ ಗಾಂಧಿ ದಂಡಿಯಾತ್ರೆ ಪ್ರತಿಮೆಗಳೊಂದಿಗೆ ಫೋಟೊ ಕ್ಲಿಕಿಸಿಕೊಂಡರು.

ಈ ಸಂದರ್ಭದಲ್ಲಿ ಮಕ್ಕಳ ಬೇಸಿಗೆ ಶಿಬಿರದ ನಿರ್ದೇಶಕ ಲಕ್ಷ್ಮಣ ತಿರುಗಾರ, ವಾರ್ತಾ ಇಲಾಖೆಯ ವಾರ್ತಾ ಸಹಾಯಕ ಅಧಿಕಾರಿ ಡಾ. ಸುರೇಶ ಹಿರೇಮಠ, ರಂಗಾಯಣ ಸಿಬ್ಬಂದಿಗಳಾದ ಕೇಶವ ಬಡಿಗೇರ, ಸ್ಮಿತಾ ಅಂಗಡಿ ಹಾಗೂ 150 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.