ಸಿರುಗುಪ್ಪ. ಏಪ್ರಿಲ್ 04 ಬಲಕುಂದಿ ಬಳಿಯ ಮುದೇನೂರು ಬ್ರಿಡ್ಜ್ ಕಂ ಬ್ಯಾರೇಜ್ ಶನೀಶ್ವರ ದೇವಸ್ಥಾನದ ಬಳಿ ನಿಂತ ನೀರಿನ ಮಡುವಿನಲ್ಲಿ ಸ್ನಾನ ಮಾಡಲು ಹೋಗಿ ಬಾಲಕ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮುದೇನೂರು ಗ್ರಾಮದ ಸಂದೀಪ (11) ಮೃತಪಟ್ಟ ಬಾಲಕ.
ಇಬ್ಬರು ಸ್ನೇಹಿತರೊಂದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಲ್ಲಿ ಸ್ನಾನ ಮಾಡಲು ತೆರಳಿದಾಗ ಈ ಘಟನೆ ಸಂಭವಿಸಿದೆ. ಬ್ಯಾರೇಜ್ ನ ನೆಲಹಾಸಿಗೆ ಹಾಕಲಾದ ಕಲ್ಲುಗಳ ಮಧ್ಯೆ ಬಾಲಕನ ಕಾಲು ಸಿಲುಕಿದ ಪರಿಣಾಮ ಮೇಲೆ ಬರಲು ಸಾಧ್ಯವಾಗದೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನಮಡುವಿನಲ್ಲಿ ಮುಳುಗಿ ಮೃತಪಟ್ಟ ಬಾಲಕ.
