ವಿದ್ಯಾರ್ಥಿಗಳಿಗೆ ಉಚಿತ ರಿಯಾಯಿತಿ ಬಸ್ ಪಾಸ್ ವಿತರಣೆ ಆರಂಭ

Vijayanagara Vani
ವಿದ್ಯಾರ್ಥಿಗಳಿಗೆ ಉಚಿತ ರಿಯಾಯಿತಿ ಬಸ್ ಪಾಸ್ ವಿತರಣೆ ಆರಂಭ
ಹೊಸಪೇಟೆ (ವಿಜಯನಗರ) ಮೇ.29: ಹೊಸಪೇಟೆ ವಿಭಾಗದಿಂದ 2024-25ನೇ ಸಾಲಿನ ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್ ಪಾಸುಗಳನ್ನು ಇಡಿಸಿಎಸ್ ಇಲಾಖೆಯ ಸೇವಾಸಿಂಧು ತಂತ್ರಾAಶದ ಮುಖಾಂತರ ಸಂಪೂರ್ಣ ಗಣಕೀಕೃತವಾಗಿ ಪಾಸುಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿರುತ್ತದೆ. ವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಡಗಲಿ, ಹಗರಿಬೊಮ್ಮನಹಳ್ಳಿ ಮತ್ತು ಹರಪ್ಪನಹಳ್ಳಿ ಘಟಕಗಳಿಂದ ಪಾಸು ವಿತರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿರುತ್ತದೆ.
2024-25ನೇ ಸಾಲಿನಲ್ಲಿ ವಿಭಾಗದಲ್ಲಿ ಪಾಸು ವಿತರಿಸಲು ಪಾಸು ಕೌಂಟರಗಳನ್ನು ಸ್ಥಾಪಿಸಲಾಗಿರುತ್ತದೆ.
ಹೊಸಪೇಟೆ ಘಟಕ: ಹೊಸಪೇಟೆ ಘಟಕಕ್ಕೆ ಸಂಬAಧಿಸಿದAತೆ 1) ಹೊಸಪೇಟೆಯ ಬಸ್ ನಿಲ್ದಾಣ 2) ಕರ್ನಾಟಕ ಒನ್, ತಾಲೂಕು ಕೋರ್ಟ್ನ ಹಿಂದುಗಡೆ, ಕೆಎಲ್‌ಎಸ್ ಕಾಂಪ್ಲೆಕ್ಸ್, ಮಹಿಳಾ ಸಮಾಜ ಶಾಲೆ ಹತ್ತಿರ ಹೊಸಪೇಟೆ.
ಕೂಡ್ಲಿಗಿ ಘಟಕ: ಕೂಡ್ಲಿಗಿ ಘಟಕದಲ್ಲಿ 1) ಕರ್ನಾಟಕ ಒನ್, 7ನೇ ವಾರ್ಡ್, ವೆಂಕಟೇಶ್ವರ ದೇವಸ್ಥಾನ ರಸ್ತೆ ಕೂಡ್ಲಿಗಿ ಹಾಗೂ 2) ಕರ್ನಾಟಕ ಒನ್, ತಾಲೂಕು ಕಚೇರಿ, 1ನೇ ಮುಖ್ಯ ರಸ್ತೆ, ಕೊಟ್ಟೂರು.
ಹಡಗಲಿ ಘಟಕ: ಹಡಗಲಿ ಘಟಕದಲ್ಲಿ ಕರ್ನಾಟಕ ಒನ್, ವಾರ್ಡ್ ನಂ-9, ಸೊಪ್ಪಿನ ಕಾಳಮ್ಮ ಬಡಾವಣೆ ಹತ್ತಿರ, ಓಂ ಶಾಂತಿ ನಿಲಯ, ಹಡಗಲಿ
ಹಗರಿಬೊಮ್ಮನಹಳ್ಳಿ ಘಟಕ: ಕರ್ನಾಟಕ ಒನ್, ವಿಠ್ಠಲ್ ಆಸ್ಪತ್ರೆ ಎದುರು, ಅಂಚೆ ಕಚೇರಿ ಮುಖ್ಯ ರಸ್ತೆ, ರಾಮನಗರ, ಹಗರಿಬೊಮ್ಮನಹಳ್ಳಿ.
ಹರಪನಹಳ್ಳಿ ಘಟಕ: ಹರಪನಹಳ್ಳಿ ಘಟಕದಲ್ಲಿ ಹರಪನಹಳ್ಳಿ ಬಸ್ ನಿಲ್ದಾಣದಲ್ಲಿ ಪಾಸು ಕೌಂಟರ್ ಸ್ಥಾಪಿಸಲಾಗಿರುತ್ತದೆ.
ಮೇ 27ರಿಂದ ವಿದ್ಯಾರ್ಥಿಗಳು ಬಸ್ ಪಾಸ್‌ಗಾಗಿ ಸೇವಾಸಿಂಧು ಪೋರ್ಟಲ್  URL-sevasindhu.karnataka.gov.in ತಂತ್ರಾAಶದಲ್ಲಿ ಗೋ ಲೈವ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 2024ರ ಜೂನ್ 1ನೇ ತಾರೀಖಿನಿಂದ ವಿದ್ಯಾರ್ಥಿ ಬಸ್ ಪಾಸ್ ವಿತರಿಸಲು ಕ್ರಮವಹಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!