ಜು.06 ರಂದು ಡಾ.ಬಾಬು ಜಗಜೀವನ ರಾಂ ಅವರ ಪರಿನಿರ್ವಾಣ ದಿನೋತ್ಸವ

Vijayanagara Vani
ಜು.06 ರಂದು ಡಾ.ಬಾಬು ಜಗಜೀವನ ರಾಂ ಅವರ ಪರಿನಿರ್ವಾಣ ದಿನೋತ್ಸವ
ಬಳ್ಳಾರಿ,ಜು.04
ಭಾರತದ ಮಾಜಿ ಉಪ ಪ್ರಧಾನಮಂತ್ರಿ, ಹಸಿರುಕ್ರಾಂತಿ ಹರಿಕಾರ, ಡಾ.ಬಾಬು ಜಗಜೀವನ ರಾಂ ಅವರ 38ನೇ ಪರಿನಿರ್ವಾಣ ದಿನೋತ್ಸವವನ್ನು ಜು.06 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾ ಮೈದಾನ ಎದುರುಗಡೆಯ ನಲ್ಲಚೇರುವು ಪ್ರದೇಶದ ಡಾ.ಬಾಬು ಜಗಜೀವನರಾಂ ಭವನದಲ್ಲಿ ಆಚರಿಸಲಾಗುವುದು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಡಾ.ಬಾಬು ಜಗಜೀವನರಾಂ ಭವನ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವರು.
ವಿವಿಧ ದಲಿತ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ದಲಿತ ಸಂಘದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!