ಕೊಟ್ಟೂರು ಪೊಲೀಸರಿಂದ ಮನೆ ಗಳ್ಳನ ಪತ್ತೆ, ಚಿನ್ನಾಭರಣ ಜಪ್ತಿ

Vijayanagara Vani
ಕೊಟ್ಟೂರು ಪೊಲೀಸರಿಂದ ಮನೆ ಗಳ್ಳನ ಪತ್ತೆ, ಚಿನ್ನಾಭರಣ ಜಪ್ತಿ

ವಿಜಯನಗರ ವಾಣಿ ಸುದ್ದಿ
ಕೊಟ್ಟೂರು : ಪಟ್ಟಣ ಸೇರಿದಂತೆ ಹಲವು ನಗರ ಪ್ರದೇಶಗಳಲ್ಲಿ ಮನೆ ಕಳವು ಮಾಡುತ್ತಿದ್ದ ಆರೋಪಿಯನ್ನು ಕೊಟ್ಟೂರು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದು ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಪಟ್ಟಣದಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ ಪಿ ಹರಿಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು ಖಚಿತ ಮಾಹಿತಿ ಮೇರೆಗೆ ಬೈರದೇವರಗುಡ್ಡ ನಿವಾಸಿಯಾದ ಹನುಮಂತ ಎಂಬಾತನನ್ನು ವಶಕ್ಕೆ ಪಡೆದು ಈತನಿಂದ ಕಳುವಾದ 2.65.000 ರೂ ಬೆಲೆಬಾಳುವ ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ತನಿಖಾ ತಂಡದಲ್ಲಿ ಪಿಎಸ್ಐ ಗೀತಾಂಜಲಿ ಶಿಂದೆ ಸಿಪಿಐ ವೆಂಕಟಸ್ವಾಮಿ , ಪೇದೆಗಳಾದ ವೀರೇಶ, ಬಸವರಾಜ, ಶಶಿಧರ, ರೇವಣಸಿದ್ದಪ್ಪ ಇವರು ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಜಿಲ್ಲಾ ಎಸ್ ಪಿ ಹರಿಬಾಬು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!