ಮನವಿಗೆ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ

Vijayanagara Vani
ಮನವಿಗೆ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ

ಸಿರುಗುಪ್ಪ.ಆ.27: ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಷನ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಜೆ. ಶ್ರೀನಿವಾಸ್ ಮೂರ್ತಿ ಇವರು ಮುಜರಾಯಿ ಧಾರ್ಮಿಕ ದತ್ತಿ ಇಲಾಖೆ ಮಂತ್ರಿ ರಾಮಲಿಂಗರೆಡ್ಡಿ, ಇವರಿಗೆ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಬರುವಂತಹ ಪ್ರವಾಸಿ ತಾಣಗಳಾದ
ದೇವಾಲಯಗಳಲ್ಲಿ ಅಸಂಘಟಿತ ವಲಯದ ಪುರೋಹಿತ ಕಾರ್ಮಿಕರಿಗೆ ಸಾರ್ವಜನಿಕವಾಗಿ ಸೇವೆ ಮಾಡಲು ಅನುಕೂಲ ಮಾಡಿಕೊಡುವುದು ಮತ್ತು ದೇವರ ದರ್ಶನ ಮಾಡುವುದಕ್ಕೆ ಮುಕ್ತ ಅವಕಾಶವನ್ನು ಮಾಡಿಕೊಡುವುದು ಮತ್ತು ಪಾಸುಗಳನ್ನು ವಿತರಣೆ ಮಾಡುವ ವಿಷಯದ ಬಗ್ಗೆ
ಸಚಿವರನ್ನು ಬೆಂಗಳೂರು ಶಾಂತಿನಗರ ಬಿಎಂಟಿಸಿ ಕಚೇರಿಯಲ್ಲಿ ಮನವಿ ಪತ್ರ
ಭೇಟಿ ಮಾಡಿ ಮನವಿ ನೀಡಿದ್ದಾರೆ. ರಾಜ್ಯದಲ್ಲಿರುವಂತಹ ಪ್ರತಿ ದೇವಾಲಯದಲ್ಲಿ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ವಲಯದ ಮಹಿಳಾ ಕಾರ್ಮಿಕರು ಮತ್ತು ಪುರುಷ ಕಾರ್ಮಿಕರಿಗೆ ಸೇವೆ ಮಾಡಲು ಪುಸಾದ ವಿತರಣೆ ಮಾಡಲು ಅನುಕೂಲ ಮಾಡಿಕೊಡಬೇಕಾಗಿ ಮತ್ತು ಯಾವುದೇ ಪೂಜಾ ಹೋಮ ಕಾರ್ಯದಲ್ಲೂ ಕೂಡ ಮುಕ್ತ ಅವಕಾಶ ಹಾಗೂ ಅನುಮತಿ ನೀಡಲು
ವಿನಂತಿಸಿಕೊಂಡಿದ್ದಾರೆ.

ಮನವಿ ಸ್ವೀಕರಿಸಿದ ಸಚಿವರು ವಿಷಯಕ್ಕೆ ಸಮ್ಮತಿಸಿ ಸೂಕ್ತ ದಾಖಲಾತಿ‌ ಪಡೆದು ಮಾಡಿ ಕೊಡುವುದಾಗಿ ಸಮ್ಮತಿಸಿದ್ದಾರೆಂದು ರಾಜ್ಯಾಧ್ಯಕ್ಷ ಡಾ. ಜೆ. ಶ್ರೀನಿವಾಸ್ ಮೂರ್ತಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!