Ad image

ಮಿಶನ್ ವಿದ್ಯಾಕಾಶಿ; ಜಿಲ್ಲಾಧಿಕಾರಿಗಳೊಂದಿಗೆ ಸಂವಾದ* ಗೆಲ್ಲಬೇಕು ಅಥವಾ ಕಲಿಯಬೇಕು; ಸೊಲು ಎಂಬುದೇ ಇಲ್ಲ; ಪರೀಕ್ಷೆ ಸಾಮಾನ್ಯ ಆತ್ಮವಿಶ್ವಾಸದಿಂದ ಎದುರಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

Vijayanagara Vani
ಧಾರವಾಡ  ಫೆ. 25:* ಜೀವನದಲ್ಲಿ ಬರುವ ಪ್ರತಿಯೊಂದರಲ್ಲೂ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಗೆಲ್ಲಬೇಕು. ಅಥವಾ ಅದರಿಂದ ಉತ್ತಮವಾದದ್ದನ್ನು ಕಲಿಯಬೇಕು. ಯಾವುದಕ್ಕೂ ಸೊಲು ಎಂಬುದೇ ಇಲ್ಲ. ಪರೀಕ್ಷೆಗಳು ಸಾಮಾನ್ಯ ಎಲ್ಲವನ್ನು ಆತ್ಮವಿಶ್ವಾಸದಿಂದ ಎದುರಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ನವಲಗುಂದ ಪಟ್ಟಣದ ಮಾಡೆಲ್ ಪ್ರೌಢಶಾಲೆಯಲ್ಲಿ ಮಿಶನ್ ವಿದ್ಯಾಕಾಶಿ ಯೊಜನೆಯಡಿ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ನವಲಗುಂದ ತಾಲೂಕಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಪಾಲಕರು ಮತ್ತು ಎಸ್ಡಿಎಂಸಿ ಅಧ್ಯಕ್ಷರೊಂದಿಗೆ ಸಭೆ ಜರುಗಿಸಿ, ಮಾತನಾಡಿದರು.
ರ್ಯಾಂಕ್ ಬ್ಯಾಂಕ್ ಎಂದೇ ಪ್ರಸಿದ್ಧವಾಗಿರುವ ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಈಗ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಯಾಕೆ ಸುಧಾರಣೆ ತರಲು ಆಗುತ್ತಿಲ್ಲ ಎಂದು ಗಮನಿಸಿದಾಗ ಈ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಹುಟ್ಟಿರುವ ಕಾರ್ಯಕ್ರಮವೇ ಮಿಷನ್ ವಿದ್ಯಾಕಾಶಿ ಎಂದು ಹೇಳಿದರು.
ಮಿಷನ್ ವಿದ್ಯಾಕಾಶಿಯ ಉದ್ದೇಶ ಶೇ.100 ರಷ್ಟು ಫಲಿತಾಂಶ ತರುವುದಾಗಿದೆ. ನವಲಗುಂದ ತಾಲೂಕಿನಲ್ಲಿ 516 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿರುವ ಬಗ್ಗೆ ಪ್ರಸಕ್ತ ಸಾಲಿನ ಆರಂಭದಲ್ಲಿ ತಿಳಿದುಬಂದಾಗ ವಿವಿಧ ಪರೀಕ್ಷೆ ಹಾಗೂ ಓದುವ ಬರೆಯುವ ಕ್ರಮಗಳ ಮೂಲಕ ಸುಧಾರಣೆ ತರಲಾಗಿದ್ದು, 296 ಮಕ್ಕಳು ಸರಾಗವಾಗಿ ಓದುಬರಹ ಮಾಡುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೂ ಪಾಸಿಂಗ್ ಪ್ಯಾಕೆಜ್ ಹಾಗೂ ರೂಡಿ ಪರೀಕ್ಷೆಗಳ ಮೂಲಕ ಪರೀಕ್ಷೆಗೆ ಸಿದ್ಧಗೊಳಿಸಲಾಗುತ್ತಿದೆ. ಇರದಲ್ಲಿನ ಬಹುತೆಕರು ಉತ್ತಿರ್ಣರಾಗುತ್ತಾರೆಂಬ ಬರವಸೆ ಇದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಎμÉ್ಟೀ ಓದಿದರು ಉತ್ತಮ ಅಂಕ ಪಡೆಯಲ್ಲಿ ಯಾಕೆ ಹಿಂದುಳಿಯುತ್ತಿದ್ದಾರೆಂದರೆ ಯಾವುದೇ ವಿಷಯವಾಗಲಿ ಇಷ್ಟಪಟ್ಟು ಅಭ್ಯಾಸ ಮಾಡಿ, ಮಾಡಿದ ಅಭ್ಯಾಸವನ್ನು ಪುನಃ ಪುನಃ ಸ್ಮರಣೆ ಮಾಡಿ, ಅಂದಾಗ ಗಟ್ಟಿಯಾಗಿ ನೆನಪಿನಲ್ಲಿ ಉಳಿದು ಪರಿಕ್ಷಾ ಸಮಯದಲ್ಲಿ ಉತ್ತರ ಬರೆಯಲು ಸಹಕಾರಿಯಾಗುತ್ತದೆ ಎಂದರು.
ಅಲ್ಲದೇ ವಿದ್ಯಾರ್ಥಿಗಳೇ ಮೊಬೈಲ್, ಟಿವಿ ಬಳಕೆಯಿಂದ ದೂರವಿರಿ. ಪಾಲಕರಾದವರು ಮಕ್ಕಳ ವಿದ್ಯಾಭ್ಯಾಸ ಸಮಯದಲ್ಲಿ ಈ ನಿಯಮವನ್ನು ತಾವು ಪಾಲಿಸಿ ಅಲ್ಲದೆ ಪರೀಕ್ಷೆ ಭಯವನ್ನ ಹೋಗಲಾಡಿಸಲು ಮಕ್ಕಳಲ್ಲಿ ತಾವು ಕೂಡ ಧೈರ್ಯ ತುಂಬಿ ಹಾಗೆ ಅವರ ವಿದ್ಯಾಬ್ಯಾಸಕ್ಕೆ ಸಹಕರಿಸಿ ಎಂದರು.
ಡಿಡಿಪಿಆಯ್ ಎಸ್.ಎಸ್.ಕೆಳದಿಮಠ ಮಾತನಾಡಿ, ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸಲು ಮಿಶನ್ ವಿದ್ಯಾಕಾಶಿ ಯೋಜನೆ ಹಮ್ಮಿಕೊಂಡಿದ್ದು, ಉತ್ತಮ ಫಲಿತಾಂಶ ನೀಡುವಲ್ಲಿ ಶಿಕ್ಷಕರ ಜವಾಬ್ದಾರಿಯ ಮುಖ್ಯವಾಗಿದ್ದು, ಉತ್ತಮ ರೀತಿಯಲ್ಲಿ ಶೈಕ್ಷಣಿಕ ಬೋಧನೆಯನ್ನು ನಿರ್ವಹಿಸಬೇಕೆಂದು ಹೇಳಿದರು.
ಸಭೆಯಲ್ಲಿ ಗುಡಿಸಾಗರ ಸರ್ಕಾರಿ ಪೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಚಿದಾನಂದ ಮುತ್ತನ್ನವರ, ಡಿ.ಎಫ್.ಮಸೂತಿ, 10ನೇ ತರಗತಿ ವಿದ್ಯಾರ್ಥಿಗಳಾದ ವೈಭವಿ ಪಾಟೀಲ, ಮೇಘಾ ಹಳ್ಳಿಕೆರಿ ಸೇರಿದಂತೆ ವಿವಿಧ ವಿಧ್ಯಾರ್ಥಿಗಳು, ಶಿಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡು ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ಮಾಡಿದರು.
ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ.ಬಿ.ಮಲ್ಲಾಡ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ ಸುಧೀರ ಸಾವಕಾರ ವೇದಿಕೆಯಲ್ಲಿದ್ದರು. ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ರೇಣುಕಾ ಅಮಲಜೇರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಂಯೋಜಕಿ ಭಾಗಿರತಿ ಮಳಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕವೃಂದ, ಎಸ್ಡಿಎಂಸಿ ಸದಸ್ಯರು, ಪಾಲಕರು ಭಾಗವಹಿಸಿದ್ದರು.

Share This Article
error: Content is protected !!
";