ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಿಹಿ ತಿನಿಸಿದ ಶಾಸಕ ಬಿ ಎಮ್ ನಾಗರಾಜ

Vijayanagara Vani
ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಿಹಿ ತಿನಿಸಿದ ಶಾಸಕ ಬಿ ಎಮ್ ನಾಗರಾಜ

ಸಿರುಗುಪ್ಪ. : ಕಳೆದ 2023ರ ಶೈಕ್ಷಣಿಕ ಸಾಲಿನ SSLC ಪರೀಕ್ಷೇಯಲ್ಲಿ ಸಿರುಗುಪ್ಪ ತಾಲೂಕು ಬಳ್ಳಾರಿ ಜಿಲ್ಲೆಗೆ ಕೊನೆ ಸ್ಥಾನ ಗಳಿಸಿತ್ತು,

ಈ ಬಾರಿಯ ಸಾಲಿನಲ್ಲಿ 79.71% ಸರಾಸರಿಯೊಂದಿಗೆ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರಿಂದ ವಿಷಯವನ್ನು ವಿವರವಾಗಿ ತಿಳಿಸಲು ಶಾಸಕರ ನಿವಾಸ ಕಚೇರಿಗೆ ಬುಧವಾರ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಗುರಪ್ಪ ಇವರಿಗೆ ಶಾಸಕ ಬಿ.ಎಂ. ನಾಗರಾಜ ಸಿಹಿ ತಿನಿಸುವ ಮೂಲಕ ಅಭಿನಂದಿಸಿದರು.

ಈವೇಳೆ ಬಿ.ಇ.ಒ ಮತ್ತು ಕಚೇರಿ ಸಿಬ್ಬಂದಿ ವರ್ಗದವರು ತಾಲೂಕು ಶಿಕ್ಷಕ ವೃಂದದವರು ಶಾಸಕ ಬಿ.ಎಂ.ನಾಗರಾಜರಿಗೆ ಪ್ರತಿಯಾಗಿ ಸಿಹಿ ತಿನ್ನಿಸಿದರು.

ಈ ಸಂದರ್ಭದಲ್ಲಿ ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ತಾಲೂಕು ಶಿಕ್ಷಕರ ಪರಿಶ್ರಮವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿ ಮುಂದೆಯೂ ಸಹ ಉತ್ತಮ ಫಲಿತಾಂಶ ಬರಲು ನಿಮ್ಮೆಲ್ಲರ ಪರಿಶ್ರಮ ಹೀಗೆ ಇರಲೆಂದು ತಿಳಿಸಿದರು.

ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹನುಮನ ಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲಿಂಗರಾಜ ರೆಡ್ಡಿ ಹನುಮಂತಪ್ಪ ನಗರಸಭೆ ಸದಸ್ಯರಾದ ಹೆಚ್ ಗಣೇಶ್ ಮುಖಂಡರಾದ ಬಿ ವೆಂಕಟೇಶ್ ಹಾಜರಿದ್ದರು.

WhatsApp Group Join Now
Telegram Group Join Now
Share This Article
error: Content is protected !!