ಹೈಕಮಾಂಡ್ ನನ್ನ ಮೇಲಿಟ್ಟ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ. ನೂತನ ಬಗರ ಹುಕುಂ ಸಮಿತಿ ಅಧ್ಯಕ್ಷ ತಿಮ್ಮನಗೌಡ

Vijayanagara Vani
ಹೈಕಮಾಂಡ್ ನನ್ನ ಮೇಲಿಟ್ಟ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ. ನೂತನ ಬಗರ ಹುಕುಂ ಸಮಿತಿ ಅಧ್ಯಕ್ಷ ತಿಮ್ಮನಗೌಡ
  ಬಳ್ಳಾರಿ.ಜೂನ್.20 ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಮುಖ್ಯಂಮತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ ನಾಗೇಂದ್ರ, ನಗರ ಶಾಸಕ ಭರತ್ ರೆಡ್ಡಿ ಇವರುಗಳು ನನ್ನ ಮೇಲೆ ಭರವಸೆಯಿಟ್ಟು ನನಗೆ ನೀಡಿರುವ ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೆನೆಂದು ನೂತನ ಬಗರ್ ಹುಕುಂ ಸಾಗುವಳಿ ಸಮಿತಿಯ ಅಧ್ಯಕ್ಷ ಸಿದ್ದಮ್ಮನಹಳ್ಳಿ ಎಚ್ ತಿಮ್ಮನಗೌಡ ತಿಳಿಸಿದರು. 
ಅವರು ಇಂದು ಬಳ್ಳಾರಿ ನಗರದ ನೂತನ ಜಿಲ್ಲಾಡಳಿತ ಭವನದಲ್ಲಿ ನಡೆದ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಮಿತಿಯ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರವನ್ನು ವಹಿಸಿಕೊಂಡು ಮಾತನಾಡಿದರು. 
ಈ ವೇಳೆ ಮಾಜಿ ಸಚಿವ ಗ್ರಾಮಿಣ ಶಾಸಕ ಬಿ.ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ, ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಎಪಿಎಂಸಿ ಉಪಾಧ್ಯಕ್ಷ ಕೊಳಗಲ್ಲು ಹುಲಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀನಳ್ಳಿ ಚಂದ್ರಶೇಖರ್ ಗೌಡ, ಮುಖಂಡರುಗಳಾದ ಬಿ.ವೆಂಕಟೇಶ್ ಪ್ರಸಾದ್, ರಾಂಪ್ರಸಾದ್, ಗೋನಾಳ್ ನಾಗಭೂಷಣಗೌಡ, ಪಾಲಿಕೆ ಸದಸ್ಯರು, ಆಗಮಿಸಿ ತಿಮ್ಮನಗೌಡ ಅವರಿಗೆ ಗೌರವಿಸಿ ಶುಭಕೋರಿ ಉತ್ತಮ ಕೆಲಸ ಮಾಡಿ ಪಕ್ಷದ ಬಲವರ್ಧನೆಗೆ ಶ್ರಮಿಸಿ, ಬಡ ಜನರ ಆಶಯದಂತೆ ಕೆಲಸ ಮಾಡುವಂತೆ ಸೂಚಿಸಿದರು. 
. ಸಮಿತಿಯ ಸದಸ್ಯರಾಗಿ ನಗರದ ಎಲ್.ಗೋವರ್ಧನರೆಡ್ಡಿ, ಮೋಕಾದ ವಿ.ಶ್ರೀನಿವಾಸ್, ರೂಪನಗುಡಿಯ ಆರ್.ಗಂಗಮ್ಮ ಕಿಷ್ಟಪ್ಪ ಇವರುಗಳು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ನೀಡಿದೆ. ಈ ಸಂದರ್ಭದಲ್ಲಿ ಮುಖಂಡರುಗಳಾದ ವೆಂಕಟೇಶ್ ಪ್ರಸಾದ್ ,ಗುಜರಿ ಬಸವರಾಜ್ ಮುದಿ ಮಲ್ಲಯ್ಯ ನಾಗಭೂಷಣ ಗೌಡ, ಶ್ರೀನಿವಾಸ್ ಭಂಡಾರಿ,, ಸೇರಿದಂತೆ ಅನೇಕ ಜನರಿದ್ದರು
WhatsApp Group Join Now
Telegram Group Join Now
Share This Article
error: Content is protected !!